ಕರ್ನಾಟಕ

karnataka

ಕಾಂಗ್ರೆಸ್ ಹಾಗೂ ವರ್ತೂರ್ ಪ್ರಕಾಶ್ ಬೆಂಬಲಿಗರ ನಡುವೆ ಮಾರಾಮಾರಿ..

By

Published : Sep 15, 2022, 12:28 PM IST

Updated : Sep 15, 2022, 12:46 PM IST

ಹಾಲಿನ ಡೈರಿ ನಿರ್ದೇಶಕ ಮಂಜುನಾಥ್ ಹಾಲಿನ ಗುಣಮಟ್ಟ ಪರೀಕ್ಷೆಯಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ವರ್ತೂರು ಪ್ರಕಾಶ್ ಬಣದವರು ಪ್ರಶ್ನೆ ಮಾಡಿದ್ದಕ್ಕೆ ಎರಡೂ ಬಣಗಳ ನಡುವೆ ಗಲಾಟೆ ಶುರುವಾಗಿದೆ.

Fight btw Congress and Varthur Prakash supporters
ಕಾಂಗ್ರೆಸ್ ಹಾಗೂ ವರ್ತೂರ್ ಪ್ರಕಾಶ್ ಬೆಂಬಲಿಗರ ನಡುವೆ ಮಾರಾಮಾರಿ

ಕೋಲಾರ: ಕಾಂಗ್ರೆಸ್ ಹಾಗೂ ವರ್ತೂರು ಪ್ರಕಾಶ್ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿರುವ ಘಟ‌ನೆ ಕೋಲಾರ ತಾಲೂಕಿನಲ್ಲಿ ನಡೆದಿದೆ. ಹೂಹಳ್ಳಿ ಗ್ರಾಮದಲ್ಲಿ ಈ ಘಟ‌ನೆ ಜರುಗಿದ್ದು, ಹಾಲಿನ ಡೈರಿ ವಿಚಾರದಲ್ಲಿ ಇಬ್ಬರ ಬಣದವರ ನಡುವೆ ಮಾರಾಮಾರಿ ಆಗಿದೆ.

ಹಾಲಿನ ಡೈರಿ ನಿರ್ದೇಶಕ ಮಂಜುನಾಥ್ ಹಾಲಿನ ಗುಣಮಟ್ಟ ಪರೀಕ್ಷೆಯಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ವರ್ತೂರು ಪ್ರಕಾಶ್ ಬಣದವರು, ಮಂಜುನಾಥ್ ಅವರನ್ನು ಪ್ರಶ್ನೆ ಮಾಡಿದ್ದಕ್ಕೆ ಎರಡೂ ಬಣಗಳ ನಡುವೆ ಗಲಾಟೆ ಶುರುವಾಗಿದೆ. ಈ ಗಲಾಟೆಯಲ್ಲಿ ವರ್ತೂರು ಪ್ರಕಾಶ್ ಬಣದವರು ವಿಠೋಬ, ಪಾಂಡುರಂಗ, ಸುಬ್ರಮಣಿ ಎಂಬುವರ ಮೇಲೆ ಚಾಕು ಇರಿದಿದ್ದು, ಗಾಯಾಳುಗಳನ್ನು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕಾಂಗ್ರೆಸ್ ಹಾಗೂ ವರ್ತೂರ್ ಪ್ರಕಾಶ್ ಬೆಂಬಲಿಗರ ನಡುವೆ ಮಾರಾಮಾರಿ

ಮಂಜುನಾಥ್ ಎಂಬಾತ ಹಾಲಿನ ಡೈರಿಯಲ್ಲಿ ನಿರ್ದೇಶಕನಾಗಿದ್ದು, ಕಾಂಗ್ರೆಸ್ ಬಣದವರು ತಂದ ಹಾಲಿನ ಗುಣಮಟ್ಟ ಪರೀಕ್ಷೆ ಮಾಡದೆ, ವರ್ತೂರ್ ಪ್ರಕಾಶ್ ಬಣಕ್ಕೆ ಸೇರಿದವರು ತಂದ ಹಾಲಿನ ಗುಣಮಟ್ಟವನ್ನು ಮಾತ್ರ ಪರೀಕ್ಷೆ ಮಾಡುತ್ತಿದ್ದ ಎಂದು ಆರೋಪಿಸಿದ್ದಾರೆ.

ವರ್ತೂರ್ ಪ್ರಕಾಶ್ ಬಣಕ್ಕೆ ಸೇರಿದ ಮಂಜುನಾಥ್, ನಾಗರಾಜ್, ವೇಣು, ರಂಗಪ್ಪ ಎಂಬುವರಿಂದ ಹಲ್ಲೆ ನಡೆದಿದ್ದು, ಎರಡೂ ಬಣದವರು ಒಂದೇ ಕುಟುಂಬಕ್ಕೆ ಸೇರಿದ ದಾಯಾದಿಗಳಾಗಿದ್ದಾರೆ ಎನ್ನಲಾಗ್ತಿದೆ. ಘಟ‌ನೆ ಸಂಬಂಧ ಐವರನ್ನು ಬಂಧಿಸಿದ್ದು, ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:2 ಸಾವಿರಕ್ಕಾಗಿ ಗಂಡ ಹೆಂಡತಿ ನಡುವೆ ಕಿತ್ತಾಟ.. ಪೋಷಕರ ಮನೆಗೆ ಕರೆಸಿ ಪತಿಗೆ ಥಳಿತ.. ಆ್ಯಸಿಡ್​ ಎರಚಿ ಕ್ರೌರ್ಯ

Last Updated : Sep 15, 2022, 12:46 PM IST

ABOUT THE AUTHOR

...view details