ಕರ್ನಾಟಕ

karnataka

ETV Bharat / state

ಶಾಸಕ-  ಮಾಜಿ ಶಾಸಕರ ಬೆಂಬಲಿಗರ ನಡುವೆ ಮಾರಾಮಾರಿ - undefined

ರಾಜ್ಯದಲ್ಲಿ ಅದ್ಯಾವ ಮುಹೂರ್ತದಲ್ಲಿ ರೆಸಾರ್ಟ್​ ರಾಜಕೀಯ ಶುರುವಾಯ್ತೋ ಗೊತ್ತಿಲ್ಲ. ಕೋಲಾರದಲ್ಲಿ ನಡಿಯುತ್ತಿರೋ ಹಾಲು ಒಕ್ಕೂಟದ ನಿರ್ದೇಕರ ಚುನಾವಣೆಯಿಂದಲೂ ಅದು ಹೊರತಾಗಿಲ್ಲ. ಕೋಚಿಮುಲ್‌ ಚುನಾವಣೆ ಮತದಾನದ ವೇಳೆ ಜಿಲ್ಲೆಯ ಹಾಲಿ ಹಾಗೂ ಮಾಜಿ ಶಾಸಕರ ಬೆಂಬಲಿಗರು ನಡೆಸಿದ ಮಾರಾಮಾರಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್​ ಮಾಡಬೇಕಾಯ್ತು.

ಮತದಾನ ವೇಳೆ ಇಬ್ಬರು ನಾಯಕರ ಬೆಂಬಲಿಗರ ನಡುವೆ ಮಾರಾಮಾರಿ

By

Published : May 14, 2019, 9:06 AM IST

ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಕರ ಸ್ಥಾನಕ್ಕೆ ಮತದಾನದ ಪ್ರಕ್ರಿಯೆ ನಡೆಯಿತು. ಈ ವೇಳೆ ಶಾಸಕ ನಂಜೇಗೌಡ ಹಾಗೂ ಮಾಜಿ ಶಾಸಕ ಮಂಜುನಾಥಗೌಡ ನಡುವೆ ಮಾರಾಮಾರಿ ನಡೆಯಿತು.

ಮಾಲೂರು ಶಾಸಕ ಕೆ. ವೈ ನಂಜೇಗೌಡ ಸಹ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಿದ್ದು, ತಮ್ಮ ಪರ ಇರುವ ಮತದಾರರನ್ನು ರೆಸಾರ್ಟ್​ನಿಂದ ನೇರವಾಗಿ ಮತಕೇಂದ್ರದ ಸ್ಥಳಕ್ಕೆ ಎರಡು ಬಸ್​ಗಳಲ್ಲಿ ಕರೆದುಕೊಂಡು ಬಂದರು. ಈ ವೇಳೆ ಮಾಲೂರಿನ ಜೆಡಿಎಸ್‌ ಮಾಜಿ ಶಾಸಕ ಮಂಜುನಾಥಗೌಡ ಬೆಂಬಲಿಗರೂ ಕುಕ್ಕರ್‌ ಗುರುತಿಗೆ ಮತ ಎಂದು ಅಣಕಿಸಿ ಕಾಲೆಳೆದರು. ಇದಕ್ಕೆ ಕೆಂಡಾಮಂಡಲರಾದ ಶಾಸಕ ನಂಜೇಗೌಡ ಕಡೆಯವರು ಹಾಗೂ ವಿರೋಧಿ ಬಣಕ್ಕೆ ಮಾರಾಮಾರಿ ಶುರುವಾಗಿಬಿಟ್ಟಿತು. ಕೊನೆಗೆ ಪೊಲೀಸರು ಲಾಠಿ ಚಾರ್ಜ್​ ನಡೆಸಿ ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡಬೇಕಾಯ್ತು.

ಮತದಾನ ವೇಳೆ ಇಬ್ಬರು ನಾಯಕರ ಬೆಂಬಲಿಗರ ನಡುವೆ ಮಾರಾಮಾರಿ

ಈ ವೇಳೆ ಮಾತನಾಡಿದ ಶಾಸಕ ನಂಜೇಗೌಡ, ಇದು ಮಾಜಿ ಶಾಸಕ ಮಂಜುನಾಥಗೌಡರಿಂದ ನನಗೆ ಕೆಟ್ಟ ಹೆಸರು ತರಲು ಹೊಸಕೋಟೆಯಿಂದ ಜನರನ್ನು ಕರೆದುಕೊಂಡು ಬಂದು ಮಾಡಿರುವ ರೌಡಿಸಂ ಎಂದು ಆರೋಪಿಸಿದರು.…

ಇನ್ನು ಈ ಬಗ್ಗೆ ಮಾತನಾಡಿದ ಮಾಜಿ ಶಾಸಕ ಮಂಜುನಾಥಗೌಡ, ಶಾಸಕ ನಂಜೇಗೌಡ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ಚುನಾವಣೆ ನಡೆಸುತ್ತಿದ್ದಾರೆ. ನಮ್ಮ ಬೆಂಬಲಿಗರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅದಕ್ಕಾಗಿ ಗಲಾಟೆ ನಡೆದಿದೆ ಎಂದರು. ಮತದಾರರ ಗುರುತಿನ ಚೀಟಿ ಹಾಗೂ ಡೆಲಿಗೇಷನ್​ ಫಾರಂ ಕಿತ್ತಿಟ್ಟುಕೊಂಡು ಅವರನ್ನು ಹೆದರಿಸಿ ಓಟು ಹಾಕಿಸಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಮೈತ್ರಿ ಧರ್ಮ ಏನೇ ಇದ್ದರೂ ಲೋಕಸಭಾ ಚುನಾವಣೆಗಷ್ಟೇ ಎಂದರು.

For All Latest Updates

TAGGED:

ABOUT THE AUTHOR

...view details