ಕೋಲಾರ: ದೇಶದ ವಿರುದ್ದ ಕೆಲಸ ಮಾಡುತ್ತಿರುವಂಥ ಸಂಘಟನೆಗಳನ್ನು ನಿಷೇಧಿಸಬೇಕು ಎಂಬ ವಿಚಾರಕ್ಕೆ ದನಿಗೂಡಿಸುವುದಾಗಿ ಸಂಸದ ಎಸ್.ಮುನಿಸ್ವಾಮಿ ಹೇಳಿದ್ದಾರೆ.
ದೇಶದಲ್ಲಿರುವ ಸಮಾಜಘಾತುಕ ಸಂಘಟನೆಗಳನ್ನು ನಿಷೇಧಿಸಿ: ಸಂಸದ ಎಸ್.ಮುನಿಸ್ವಾಮಿ - S. Muniswamy, MP
ಎಸ್.ಡಿ.ಪಿ.ಐ ಹಾಗೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಗಳನ್ನು ನಿಷೇಧಿಸಲು ನನ್ನ ಸಹಮತವಿದೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದ್ದಾರೆ.
![ದೇಶದಲ್ಲಿರುವ ಸಮಾಜಘಾತುಕ ಸಂಘಟನೆಗಳನ್ನು ನಿಷೇಧಿಸಿ: ಸಂಸದ ಎಸ್.ಮುನಿಸ್ವಾಮಿ eliminate-antisocial-organizations-in-the-country-said-by-mp-muniswami](https://etvbharatimages.akamaized.net/etvbharat/prod-images/768-512-5754961-thumbnail-3x2-bng.jpg)
eliminate-antisocial-organizations-in-the-country-said-by-mp-muniswami
ದೇಶದಲ್ಲಿರುವ ಸಮಾಜಘಾತುಕ ಸಂಘಟನೆಗಳನ್ನು ನಿಷೇಧಿಸಿ: ಸಂಸದ ಎಸ್.ಮುನಿಸ್ವಾಮಿ
ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಸ್.ಡಿ.ಪಿ.ಐ ಹಾಗೂ ಪಾಫ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಗಳು ಮೊದಲಿನಿಂದಲೂ ದೇಶದ ವಿರುದ್ದ ಕೆಲಸ ಮಾಡಿಕೊಂಡು ಬಂದಿದೆ. ಇದೀಗ ಈ ಸಂಘಟನೆಗಳ ಉಪಟಳ ಹೆಚ್ಚಾಗಿದ್ದು, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರನ್ನು ಕೊಲೆ ಮಾಡುವುದಕ್ಕೆ ಸಂಚು ರೂಪಿಸಿದ್ದನ್ನು ಬಂಧಿತರೇ ಬಹಿರಂಗಪಡಿಸಿದ್ದಾರೆ.ಪ್ರಕರಣದಲ್ಲಿ ಬಂಧಿತರಾದ ಆರು ಮಂದಿಯಲ್ಲಿ ಕೋಲಾರ ಮೂಲದ ಇಬ್ಬರು ಯುವಕರಿದ್ದಾರೆ. ನಮ್ಮ ಜಿಲ್ಲೆಯ ಯುವಕರು ಈ ರೀತಿ ಅಡ್ಡದಾರಿ ಹಿಡಿಯುವುದನ್ನು ಬಿಟ್ಟು ದೇಶಕ್ಕೋಸ್ಕರ ಚಿಂತನೆ ಮಾಡಬೇಕು ಮುನಿಸ್ವಾಮಿ ಹೇಳಿದರು.