ಕರ್ನಾಟಕ

karnataka

ಮಾಲೂರು ಪೊಲೀಸರ ಕಾರ್ಯಾಚರಣೆ: ನಾಲ್ವರು ಡಕಾಯಿತರ ಬಂಧನ

ದಾರಿಹೋಕರನ್ನು ದೋಚುತ್ತಿದ್ದ ನಾಲ್ವರನ್ನು ಕೋಲಾರ ಜಿಲ್ಲಾ ಪೊಲೀಸರು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.

By

Published : Oct 24, 2019, 4:32 PM IST

Published : Oct 24, 2019, 4:32 PM IST

ನಾಲ್ವರು ಡಕಾಯಿತರ ಬಂಧನ


ಕೋಲಾರ: ದಾರಿಹೋಕರನ್ನ ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ನಾಲ್ವರು ಡಕಾಯಿತರನ್ನ ಬಂಧಿಸುವಲ್ಲಿ ಜಿಲ್ಲೆಯ ಮಾಲೂರು ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರಿಂದ ಮೂರು ದ್ವಿಚಕ್ರ ವಾಹನ ಸೇರಿ ಕೃತ್ಯಕ್ಕೆ ಬಳಸಲಾಗಿದ್ದ ಡ್ರ್ಯಾಗನ್, ಮಾಸ್ಕ್​ಗಳನ್ನ ವಶಪಡಿಸಿಕೊಂಡಿದ್ದಾರೆ. ಕಳೆದ ಅಕ್ಟೋಬರ್ 1ರಂದು ಮಾಲೂರು ತಾಲೂಕಿನ ಹಾರೋಹಳ್ಳಿ ಬಳಿ ಶಂಕರ್ ಎಂಬಾತನನ್ನ ಅಡ್ಡಗಟ್ಟಿ, ಚಾಕು ತೋರಿಸಿ ಮೊಬೈಲ್ ಹಾಗೂ ಒಂದೂವರೆ ಲಕ್ಷ ನಗದನ್ನ ಸುಲಿಗೆ ಮಾಡಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಸಿಕಂದರ್, ಮುಸ್ತಾಫಾ, ಸೈಯದ್ ಶಾಮಿರ್ ಹಾಗೂ ಅಬ್ಬೇನಹಳ್ಳಿ ಗ್ರಾಮದ ಏಜಾಜ್ ಪಾಷಾ ಎಂಬುವರನ್ನು ದಸ್ತಗಿರಿ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.

ABOUT THE AUTHOR

...view details