ಕೋಲಾರ : ಬಿಗ್ಬಾಸ್ ಸೀಸನ್ 7 ಕಾರ್ಯಕ್ರಮದ ಸ್ಪರ್ಧಿಯಾಗಿರುವ ಚೈತ್ರಾ ಕೊಟ್ಟೂರ್ ಅವರ ವಿರುದ್ಧ ಕಾನೂನು ರೀತಿ ಕ್ರಮ ಜರಗಿಸಬೇಕೆಂದು ಕೋಲಾರದಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಸಂಘಟನೆಯವರು ಒತ್ತಾಯಿಸಿದರು.
ಚೈತ್ರಾ ಕೊಟ್ಟೂರ್ ಬಿಗ್ಬಾಸ್ನಿಂದ ಹೊರ ಹಾಕಬೇಕು: ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಒತ್ತಾಯ - Chaitra kottur Latest Issues
ಬಿಗ್ಬಾಸ್ ಸೀಸನ್ 7 ಕಾರ್ಯಕ್ರಮದ ಸ್ಪರ್ಧಿಯಾಗಿರುವ ಚೈತ್ರಾ ಕೊಟ್ಟೂರ್ ಅವರ ವಿರುದ್ದ ಕಾನೂನು ರೀತಿ ಕ್ರಮ ಜರಗಿಸಬೇಕೆಂದು ಕೋಲಾರದಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಸಂಘಟನೆಯವರು ಒತ್ತಾಯಿಸಿದರು.

ಅಂಬೇಡ್ಕರ್ ಸ್ವಾಭಿಮಾನಿ ಸೇನೆ
ಅಂಬೇಡ್ಕರ್ ಸ್ವಾಭಿಮಾನಿ ಸೇನೆ
ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಂಘಟನೆ ಅಧ್ಯಕ್ಷ, ಬಿಗ್ಬಾಸ್ ಸೀಸನ್ 7 ಕಾರ್ಯಕ್ರಮದ 22 ನೇ ಸಂಚಿಕೆಯಲ್ಲಿ ಅಸ್ಪೃಶ್ಯತೆ ಕುರಿತು ಪರೋಕ್ಷವಾಗಿ ಸಮರ್ಥನೆ ಮಾಡಿಕೊಂಡಿದ್ದಲ್ಲದೇ ವಿಚಿತ್ರವಾಗಿ ನಕ್ಕಿದ್ದಾರೆಂದು ಆರೋಪಿಸಿದ್ದಾರೆ. ಅಲ್ಲದೆ ಬಹಿರಂಗವಾಗಿ ಅಸ್ಪೃಶ್ಯತೆ ಆಚರಣೆ ಬಗ್ಗೆ ಮಾತನಾಡುವ ಮೂಲಕ ಶೋಷಿತ ಸಮುದಾಯಕ್ಕೆ ಹಾಗೂ ದೇಶ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆಂದು ದೂರಿದ್ರು.