ಕರ್ನಾಟಕ

karnataka

ETV Bharat / state

ಪೊಲೀಸ್ ಕಾನ್ಸ್​ಟೆಬಲ್​​ ವಿರುದ್ಧ ದೌರ್ಜನ್ಯ ಆರೋಪ: ಕೋಲಾರದಲ್ಲಿ ಸಂತ್ರಸ್ತೆಯ ಏಕಾಂಗಿ ಹೋರಾಟ - Kolar Latest news

ನನಗೆ ನ್ಯಾಯ ಕೊಡಿಸಿ ಎಂದು ಕೋಲಾರ ನಗರದ ಗಾಂಧಿ ಪ್ರತಿಮೆ ಎದುರು ಕಣ್ಣೀರಿಡುತ್ತಾ ಏಕಾಂಗಿ ಹೋರಾಟಕ್ಕೆ ಸಂತ್ರಸ್ತೆ ಮುಂದಾಗಿದ್ದಾಳೆ. ಶ್ರೀನಿವಾಸಪುರ ತಾಲೂಕಿನ ಶಿಗೇಹಳ್ಳಿ ನಿವಾಸಿ 6 ತಿಂಗಳ ಹಿಂದೆ ಕೌಟುಂಬಿಕ ಕಲಹ ಹಿನ್ನೆಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ವಿಚಾರಣೆ ನೆಪದಲ್ಲಿ ಮನೆಗೆ ಬಂದು ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ.

kolar
ಪೊಲೀಸ್ ಕಾನ್ಸ್​ಟೆಬಲ್​​ ವಿರುದ್ಧ ದೌರ್ಜನ್ಯ ಆರೋಪ: ಕೋಲಾರದಲ್ಲಿ ಸಂತ್ರಸ್ತೆಯ ಏಕಾಂಗಿ ಹೋರಾಟ

By

Published : Jun 19, 2020, 8:06 PM IST

Updated : Jun 19, 2020, 8:49 PM IST

ಕೋಲಾರ: ಕೌಟುಂಬಿಕ ಕಲಹದ ಹಿನ್ನೆಲೆ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆಗೆ ಪೊಲೀಸ್ ಕಾನ್​ಸ್ಟೇಬಲ್​ ದೌರ್ಜನ್ಯ ನಡೆಸಿರುವ ಆರೋಪ ಇದೀಗ ಕೋಲಾರದಲ್ಲಿ ಕೇಳಿ ಬಂದಿದೆ. ಹಾಗಾಗಿ ನನಗೆ ನ್ಯಾಯ ಕೊಡಿಸಿ ಎಂದು ನಗರದ ಗಾಂಧಿ ಪ್ರತಿಮೆ ಎದುರು ಕಣ್ಣೀರಿಡುತ್ತಾ ಏಕಾಂಗಿ ಹೋರಾಟಕ್ಕೆ ಸಂತ್ರಸ್ತೆ ಮುಂದಾಗಿದ್ದಾಳೆ.

ಶ್ರೀನಿವಾಸಪುರ ತಾಲ್ಲೂಕಿನ ಶಿಗೇಹಳ್ಳಿ ನಿವಾಸಿ 6 ತಿಂಗಳ ಹಿಂದೆ ಕೌಟುಂಬಿಕ ಕಲಹ ಹಿನ್ನೆಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ವಿಚಾರಣೆ ನೆಪದಲ್ಲಿ ಮನೆಗೆ ಬಂದು ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ. ಶ್ರೀನಿವಾಸಪುರ ಪೊಲೀಸ್ ಕಾನ್​ಸ್ಟೇಬಲ್​ ರವೀಂದ್ರ ವಿರುದ್ಧ ಅತ್ಯಾಚಾರ ಆರೋಪ ಮಾಡುತ್ತಿದ್ದು, ಆರೋಪಿಯನ್ನ ಬಂಧಿಸಿ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾಳೆ.

ಪೊಲೀಸ್ ಕಾನ್ಸ್​ಟೆಬಲ್​​ ವಿರುದ್ಧ ದೌರ್ಜನ್ಯ ಆರೋಪ: ಕೋಲಾರದಲ್ಲಿ ಸಂತ್ರಸ್ತೆಯ ಏಕಾಂಗಿ ಹೋರಾಟ

ಕಳೆದ 6 ತಿಂಗಳಿನಿಂದ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದು, ಶ್ರೀನಿವಾಸಪುರ ಪೊಲೀಸ್ ಠಾಣೆ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದರೂ ನ್ಯಾಯ ಸಿಕ್ಕಿಲ್ಲ ಎಂದು ದೂರಿನ ಪ್ರತಿಯಲ್ಲಿ ಆರೋಪಿಸಿದ್ದಾಳೆ. ಇನ್ನಾದರೂ ಕಾನ್​ಸ್ಟೇಬಲ್​ ರವೀಂದ್ರನನ್ನ ಬಂಧಿಸಿ ನ್ಯಾಯ ಕೊಡಿಸಿ. ಇಲ್ಲವಾದಲ್ಲಿ ನಾನು ಇಲ್ಲಿಯೆ ಕೊನೆಯುಸಿರೆಳೆಯುವುದಾಗಿ ಬೆದರಿಕೆ ಹಾಕಿದ್ದು, ಗಾಂಧಿ ಪ್ರತಿಮೆ ಎದುರು ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.

ಸ್ಥಳಕ್ಕೆ ಬಂದ ಕೋಲಾರ ನಗರ ಪೊಲೀಸರು ಮಹಿಳೆಯ ಮನವೊಲಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗದ ಹಿನ್ನೆಲೆ ಮಹಿಳೆಯನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Last Updated : Jun 19, 2020, 8:49 PM IST

For All Latest Updates

ABOUT THE AUTHOR

...view details