ಕರ್ನಾಟಕ

karnataka

ETV Bharat / state

ಎಂಇಎಸ್​​ ಕಿಡಿಗೇಡಿಗಳು ಪುಂಡಾಟ ನಿಲ್ಲಿಸಬೇಕು : ಡಾಲಿ ಧನಂಜಯ್​ - ಬೆಳಗಾವಿ ಗಲಭೆ ಬಗ್ಗೆ ಡಾಲಿ ಧನಂಜಯ್ ಪ್ರತಿಕ್ರಿಯೆ

ಇಂತಹ ಕೆಲ ಕಿಡಿಗೇಡಿಗಳು ಮಾಡುವ ಅಹಿತಕರ ಘಟನೆಗಳಿಂದ ಇನೋಸೆಂಟ್​​ ಜನರಿಗೆ ತೊಂದರೆಯಾಗಬಾರದು. ಈ ಕುರಿತಂತೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಕಲಾವಿದನಾಗಿ, ಸಾಮಾನ್ಯ ವ್ಯಕ್ತಿಯಾಗಿ ಪ್ರತಿಭಟಿಸಬಹುದು. ರಾಜ್ಯದಲ್ಲಿ ಸಾಮರಸ್ಯ ಕದಡುವ ಕೆಲಸ ಆಗಬಾರದು. ಹೋರಾಟದ ವಿಚಾರಕ್ಕೆ ಚಲನಚಿತ್ರ ಮಂಡಳಿಯ ಯಾವುದೇ ನಿರ್ಧಾರಕ್ಕೂ ನಾನು ಬದ್ಧ..

Actor Daali Dhananjay reaction about Belgaum riot
ಬೆಳಗಾವಿ ಗಲಭೆ ಬಗ್ಗೆ ಡಾಲಿ ಧನಂಜಯ್​ ಪ್ರತಿಕ್ರಿಯೆ

By

Published : Dec 19, 2021, 6:45 PM IST

Updated : Dec 19, 2021, 7:14 PM IST

ಕೋಲಾರ :ಬೆಳಗಾವಿಯಲ್ಲಿ ಕಾಂತ್ರಿಕಾರಿ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಧ್ವಂಸಗೊಳಿಸಿ ವಿಕೃತಿ ಮೆರೆದಿರುವ ಎಂಇಎಸ್​​ ಕಿಡಿಗೇಡಿಗಳು ಪುಂಡಾಟ ನಿಲ್ಲಿಸಬೇಕು. ಎಲ್ಲಾ ರಾಜ್ಯದಲ್ಲೂ ಎಲ್ಲಾ ಭಾಷೆಯ ಜನರಿದ್ದಾರೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ನಟ ಡಾಲಿ ಧನಂಜಯ್ ಹೇಳಿದರು.

ಬೆಳಗಾವಿ ಗಲಭೆ ಬಗ್ಗೆ ಡಾಲಿ ಧನಂಜಯ್​ ಪ್ರತಿಕ್ರಿಯೆ

ನಗರದ ನರಸಾಪುರದಲ್ಲಿ ಪುನೀತ್ ನಮನ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬೆಳಗಾವಿಯಲ್ಲಿ ನಡೆಯುತ್ತಿರುವ ಗಲಭೆಯನ್ನು ನಿಲ್ಲಿಸಬೇಕು. ಮಹಾರಾಷ್ಟ್ರದಲ್ಲಿ ಕನ್ನಡಿಗರಿದ್ದಾರೆ. ಅದರಂತೆ ರಾಜ್ಯದಲ್ಲೂ ಮರಾಠಿಗರಿದ್ದಾರೆ.

ಇಂತಹ ಕೆಲ ಕಿಡಿಗೇಡಿಗಳು ಮಾಡುವ ಅಹಿತಕರ ಘಟನೆಗಳಿಂದ ಇನೋಸೆಂಟ್​​ ಜನರಿಗೆ ತೊಂದರೆಯಾಗಬಾರದು. ಈ ಕುರಿತಂತೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಕಲಾವಿದನಾಗಿ, ಸಾಮಾನ್ಯ ವ್ಯಕ್ತಿಯಾಗಿ ಪ್ರತಿಭಟಿಸಬಹುದು. ರಾಜ್ಯದಲ್ಲಿ ಸಾಮರಸ್ಯ ಕದಡುವ ಕೆಲಸ ಆಗಬಾರದು. ಹೋರಾಟದ ವಿಚಾರಕ್ಕೆ ಚಲನಚಿತ್ರ ಮಂಡಳಿಯ ಯಾವುದೇ ನಿರ್ಧಾರಕ್ಕೂ ನಾನು ಬದ್ಧ ಎಂದರು.

ಪುನೀತ್​ ರಾಜ್​ ಕುಮಾರ್ ಅವರ ಹೆಸರಿನಲ್ಲಿ ಅನೇಕ ಸೇವಾ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಸೇವಾ ಕಾರ್ಯಕ್ರಮಗಳನ್ನು ನೋಡಿದಾಗ ಅಪ್ಪು ಅವರ ನೆನಪು ಹೆಚ್ಚಾಗುತ್ತದೆ. ಮುಂದೆ ನಾನು ಅಭಿನಯಿಸಿರುವ ಬಡವ ರಾಸ್ಕಲ್ ಸಿನಿಮಾ ಬಿಡುಗಡೆಯಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಗೆ ಬರುವೆ ಎಂದರು.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನೆನಪಿನ ಹಾದಿಯಲ್ಲಿ ಚಂದನವನ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅನೇಕ ಜನರು ನೇತ್ರದಾನ- ಅಂಗಾಂಗ ದಾನ ನೋಂದಣಿ ಮಾಡಿಕೊಂಡರು. ಇದರ ಜೊತೆಗೆ ರಕ್ತದಾನ ಹಾಗೂ ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ ಮತ್ತು ವಿಮೆ ಸೌಲಭ್ಯ ವಿತರಣೆ ಮಾಡಲಾಯಿತು.

ಇದನ್ನೂ ಓದಿ: ನಿಮ್ಮೂರಿಗೆ ಬಂದಾಗ ರೊಟ್ಟಿ ತಿನ್ನಿಸಿದ್ದೀರಿ.. ತವರೂರಲ್ಲಿ ಸಿಎಂ ಬೊಮ್ಮಾಯಿ ಭಾವುಕ..

Last Updated : Dec 19, 2021, 7:14 PM IST

ABOUT THE AUTHOR

...view details