ಕೊಡಗು: ವಿಧಾನ ಪರಿಷತ್ಗೆ ಬಿಜೆಪಿಯ ಸಿ.ಪಿ. ಯೋಗೇಶ್ವರ್ ನೇಮಕ ಸಂವಿಧಾನ ಬಾಹಿರವಾಗಿದ್ದು, ಅವರನ್ನು ಆ ಸ್ಥಾನದಿಂದ ವಾಪಸ್ ತೆಗೆದುಕೊಳ್ಳಬೇಕು ಎಂದು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎಸ್.ಎಸ್. ಪೊನ್ನಣ್ಣ ಆಗ್ರಹಿಸಿದ್ದಾರೆ.
ಎಂಎಲ್ಸಿ ಸ್ಥಾನದಿಂದ ಯೋಗೇಶ್ವರ್ ವಜಾಗೊಳಿಸಿ: ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಪೊನ್ನಣ್ಣ ಆಗ್ರಹ - Ponnanna, president of KPCC legal unit
ವಿಧಾನ ಪರಿಷತ್ಗೆ ಸಿ ಪಿ ಯೋಗೇಶ್ವರ್ ನೇಮಕ ಸಂವಿಧಾನ ಬಾಹಿರವಾಗಿದೆ. ಈ ಕುರಿತು ರಾಜ್ಯಪಾಲರಿಗೆ ಪತ್ರ ಬರೆದು ಹಲವು ದಿನಗಳು ಕಳೆದಿವೆ. ಆದರೆ ಇದುವರೆಗೆ ಪ್ರತ್ಯುತ್ತರ ಬಂದಿಲ್ಲ. ಮೆಗಾ ಸಿಟಿ ಯೋಜನೆ ಮೂಲಕ ಯೋಗೇಶ್ವರ್ ಬಹುಕೋಟಿ ಹಗರಣ ಮಾಡಿದ್ದಾರೆ. ಅದರಡಿಯಲ್ಲಿ ವಂಚನೆ ಸೇರಿದಂತೆ 9 ಕ್ಕೂ ಹೆಚ್ಚು ಚಾರ್ಜ್ ಶೀಟ್ ಸಲ್ಲಿಕೆಯಾಗಿವೆ ಎಂದು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಪೊನ್ನಣ್ಣ ಆರೋಪಿಸಿದ್ದಾರೆ.
![ಎಂಎಲ್ಸಿ ಸ್ಥಾನದಿಂದ ಯೋಗೇಶ್ವರ್ ವಜಾಗೊಳಿಸಿ: ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಪೊನ್ನಣ್ಣ ಆಗ್ರಹ yogeshwar-dismissed-from-mlc-position-said-ponnanna](https://etvbharatimages.akamaized.net/etvbharat/prod-images/768-512-8845714-919-8845714-1600417076441.jpg)
ಎಂಎಲ್ಸಿ ಸ್ಥಾನದಿಂದ ಯೋಗೇಶ್ವರ್ ವಜಾಗೊಳಿಸಿ, ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಪೊನ್ನಣ್ಣ ಆಗ್ರಹ
ಎಂಎಲ್ಸಿ ಸ್ಥಾನದಿಂದ ಯೋಗೇಶ್ವರ್ ವಜಾಗೊಳಿಸಿ: ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಪೊನ್ನಣ್ಣ ಆಗ್ರಹ
ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಯೋಗೇಶ್ವರ್ ನೇಮಕ ಸಂವಿಧಾನ ಬಾಹಿರವಾಗಿದೆ. ಈ ಕುರಿತು ರಾಜ್ಯಪಾಲರಿಗೆ ಪತ್ರ ಬರೆದು ಹಲವು ದಿನಗಳು ಕಳೆದಿವೆ. ಆದರೆ ಇದುವರೆಗೆ ಪ್ರತ್ಯುತ್ತರ ಬಂದಿಲ್ಲ. ಮೆಗಾ ಸಿಟಿ ಯೋಜನೆ ಮೂಲಕ ಯೋಗೇಶ್ವರ್ ಬಹುಕೋಟಿ ಹಗರಣ ಮಾಡಿದ್ದಾರೆ. ಅದರಡಿಯಲ್ಲಿ ವಂಚನೆ ಸೇರಿದಂತೆ 9 ಕ್ಕೂ ಹೆಚ್ಚು ಚಾರ್ಜ್ ಶೀಟ್ ಸಲ್ಲಿಕೆಯಾಗಿವೆ ಎಂದು ಆರೋಪಿಸಿದರು.
ಆರ್ಟಿಕಲ್ 171 ಅಡಿಯಲ್ಲಿ ಯೋಗೇಶ್ವರ್ ಅವರ ನಾಮನಿರ್ದೇಶನವನ್ನು ವಾಪಸ್ ಪಡೆಯಬೇಕು. ಯೋಗೇಶ್ವರ್ ಅವರನ್ನು ಯಾವ ವಿಶೇಷ ಜ್ಞಾನದ ಮೇಲೆ ನಾಮನಿರ್ದೇಶನ ಮಾಡಲಾಗಿದೆ ಎಂದು ಪೊನ್ನಣ್ಣ ಪ್ರಶ್ನಿಸಿದ್ದಾರೆ.
Last Updated : Sep 18, 2020, 3:24 PM IST