ಕೊಡಗು:ಜಿಲ್ಲೆಯ ತೋರದಲ್ಲಿ ಎಂಬಲ್ಲಿ ಗುಡ್ಡ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣ್ಣಿನಡಿ ಸಿಲುಕಿದ್ದ ಮಹಿಳೆಯ ಶವ ಪತ್ತೆಯಾಗಿದೆ.
ಪ್ರವಾಹದ ವೇಳೆ ಗುಡ್ಡ ಕುಸಿತ: 14 ದಿನಗಳ ಬಳಿಕ ಪತ್ತೆಯಾಯ್ತು ಮಹಿಳೆಯ ಶವ - ಎನ್ಡಿಆರ್ಎಫ್
ಭಾರಿ ಮಳೆಗೆ ಉಂಟಾದ ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾಗಿದ್ದ 8 ಜನರ ಪೈಕಿ 4 ಜನರ ಶವ ಹೊರತೆಗೆಯಲಾಗಿದೆ. ಮಣ್ಣಿನಡಿ ಸಿಲುಕಿದ್ದ ಮಹಿಳೆಯೊಬ್ಬಳ ಶವ ಇದೀಗ ಪತ್ತೆಯಾಗಿದೆ.
ಗುಡ್ಡ ಕುಸಿತ
ಮಹಿಳೆ ಲೀಲಾ ಶವ ಇದಾಗಿದ್ದು, ಲೀಲಾಳ ಪತಿ ಅಪ್ಪು ತಮ್ಮ ಪತ್ನಿಯ ಶವ ಎಂದು ಗುರುತಿಸಿದ್ದಾರೆ. ಪತ್ನಿಯನ್ನು ಕಳೆದುಕೊಂಡಿದ್ದ ಪತಿ ಅಪ್ಪು ಕಳೆದ 14 ದಿನಗಳಿಂದ ಇದೇ ಗುಡ್ಡದಲ್ಲಿ ಹುಡುಕಾಟ ನಡೆಸುತ್ತಿದ್ದರು. ಜಿಲ್ಲೆಯಲ್ಲಿ ಪ್ರವಾಹಕ್ಕೆ ಇದುವರೆಗೂ 12 ಮಂದಿ ಬಲಿಯಾಗಿದ್ದಾರೆ.
ವಿರಾಜಪೇಟೆ ತಾಲೂಕಿನ ತೋರದಲ್ಲಿಯಲ್ಲಿ ಭಾರೀ ಮಳೆಗೆ ಗುಡ್ಡ ಕುಸಿದಿತ್ತು, ಈ ವೇಳೆ 8 ಜನರು ನಾಪತ್ತೆಯಾಗಿದ್ದರು. ಇದುವರೆಗೆ 4 ಶವ ಹೊರತೆಗೆಯಲಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ. ಎನ್ಡಿಆರ್ಎಫ್ ಹಾಗೂ ಅಗ್ನಿಶಾಮಕ ತಂಡ ಶೋಧ ಕಾರ್ಯ ಮುಂದುವರೆಸಿದೆ.
Last Updated : Aug 22, 2019, 6:31 PM IST