ಕರ್ನಾಟಕ

karnataka

ಲಾಕ್‌ಡೌನ್‌ನಿಂದ ಆರ್ಥಿಕ ಸ್ಥಿತಿ ಏರುಪೇರು : ಸಚಿವ ಸೋಮಣ್ಣ ಅಭಿಪ್ರಾಯ

By

Published : Jun 5, 2020, 2:27 PM IST

ಆರ್ಥಿಕ ‌ಪರಿಸ್ಥಿತಿ ಸುಧಾರಣೆಗಾಗಿ ಲಾಕ್‍ಡೌನ್​ಲ್ಲಿ ಸಡಿಲಿಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಆರ್ಥಿಕ ಏರುಪೇರು ಸುಧಾರಿಸಬೇಕಾಗಿದೆ ಎಂದು ಪ್ರಧಾನಿ ಹಾಗೂ ಸಿಎಂ ಹೇಳಿದ್ದಾರೆ ಎಂದು ವಸತಿ ಸಚಿವ ವಿ, ಸೋಮಣ್ಣ ಹೇಳಿದ್ದಾರೆ.

V. Somanna
ಸಚಿವ ಸೋಮಣ್ಣ

ಕೊಡಗು : ಲಾಕ್‍ಡೌನ್​ನಿಂದಾಗಿ ಎರಡು ತಿಂಗಳು ಜನ ಜೀವನದಲ್ಲಿ ಸಾಕಷ್ಟು ಏರುಪೇರಾಗಿದ್ದು, ದೇಶದ ಆರ್ಥಿಕ ಸ್ಥಿತಿ ಕೂಡ ಸುಧಾರಿಸಬೇಕಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಆರ್ಥಿಕ ‌ಪರಿಸ್ಥಿತಿ ಸುಧಾರಣೆಗಾಗಿ ಲಾಕ್‍ಡೌನ್​ಲ್ಲಿ ಸಡಿಲಿಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಆರ್ಥಿಕ ಏರುಪೇರು ಸುಧಾರಿಸಬೇಕಾಗಿದೆ ಎಂದು ಪ್ರಧಾನಿ ಹಾಗೂ ಸಿಎಂ ಹೇಳಿದ್ದಾರೆ. ಕಂಟೇನ್​​ಮೆಂಟ್​​ ಏರಿಯಾದಲ್ಲಿ ಲಾಕ್‍ಡೌನ್ ಮುಂದುವರೆಯಲಿದೆ. ಸಡಿಲಿಕೆ ಆಗಿರುವೆಡೆ ಜನರು ಕಡ್ಡಾಯವಾಗಿ ಸ್ವಯಂ ಪ್ರೇರಣೆಯಿಂದ ಮಾಸ್ಕ್ ಧರಿಸಿ ಎಚ್ಚರ ವಹಿಸಬೇಕಾಗಿದೆ ಎಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಸಚಿವ ಸೋಮಣ್ಣ

ಮೈಸೂರಿಗೆ ಇಬ್ಬರು ಉಸ್ತುವಾರಿಗಳಿದ್ದಾರೆ ಎನ್ನುವ ಸಾ.ರಾ. ಮಹೇಶ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅದೇನೋ ನನಗೆ ಗೊತ್ತಿಲ್ಲ.‌ ಆ ಬಗ್ಗೆ ಅವರನ್ನೇ ಕೇಳಬೇಕು ಎಂದು ಮೈಸೂರು ಉಸ್ತುವಾರಿ ತಪ್ಪಿರುವುದಕ್ಕೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ABOUT THE AUTHOR

...view details