ಕರ್ನಾಟಕ

karnataka

ETV Bharat / state

ಚಿರತೆ ದಾಳಿಗೆ ಕರು ಬಲಿ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ

ಕೊಡಗು ಜಿಲ್ಲೆಯ ಯಮುಡಿ ಗ್ರಾಮದ ರವಿ ಕಾರ್ಯಪ್ಪ ಎಂಬುವವರಿಗೆ ಸೇರಿದ ಕರು ಇದಾಗಿದ್ದು, ಹಾಡು ಹಗಲೇ 2 ತಿಂಗಳ ಕರುವಿನ ಮೇಲೆ ದಾಳಿ ನಡೆಸಿದ ಚಿರತೆ ಕರುವಿನ ರಕ್ತ ಹೀರಿದೆ.

By

Published : Sep 16, 2019, 4:56 AM IST

ಚಿರತೆ ದಾಳಿಗೆ ಕರು ಬಲಿ

ಕೊಡಗು:ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಅಟ್ಟಹಾಸ ಮುಂದುವರೆದಿದ್ದು, ಚಿರತೆ ದಾಳಿಗೆ ಕರು ಬಲಿಯಾಗಿರುವ ಘಟನೆ ವಿರಾಜಪೇಟೆ ತಾಲೂಕಿನ ಮಾಯಮುಡಿಯಲ್ಲಿ ನಡೆದಿದೆ.

ಮಾಯಮುಡಿ ಗ್ರಾಮದ ರವಿ ಕಾರ್ಯಪ್ಪ ಎಂಬುವವರಿಗೆ ಸೇರಿದ ಕರು ಇದಾಗಿದ್ದು, ಹಾಡು ಹಗಲೇ 2 ತಿಂಗಳ ಕರುವಿನ ಮೇಲೆ ದಾಳಿ ನಡೆಸಿದ ಚಿರತೆ ಕರುವಿನ ರಕ್ತ ಹೀರಿದೆ. ಬೆಳಗ್ಗೆ ಹಾಲು ಕುಡಿಸಿ ತೋಟದ ಭಾಗದಲ್ಲಿ ಮೇಯಲು ಬಿಟ್ಟಾಗ ಈ ಘಟನೆ ನಡೆದಿದೆ.

ಕರುವನ್ನು ಹತ್ಯೆಗೈದು ಸಮೀಪದ ತೋಟದಲ್ಲಿ ಚಿರತೆ ಬೀಡು ಬಿಟ್ಟಿದೆ ಎನ್ನಲಾಗಿದೆ. ಗ್ರಾಮದ ‌ವ್ಯಾಪ್ತಿಯ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದ್ದು, ತಕ್ಷಣವೇ ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ABOUT THE AUTHOR

...view details