ಕರ್ನಾಟಕ

karnataka

ETV Bharat / state

ಕುಡಿದ ಮತ್ತಿನಲ್ಲಿ ತಂದೆ-ತಾಯಿಯನ್ನೇ ಹತ್ಯೆ ಮಾಡಿದ ವಂಶೋದ್ಧಾರಕ - ಕುಡಿದ ಮತ್ತಿನಲ್ಲಿ ಪೋಷಕರನ್ನು ಕೊಲೆ ಮಾಡಿದ ಮಗ

ಸೋಮವಾರ ರಾತ್ರಿ ಕಂಠಪೂರ್ತಿ ಕುಡಿದಿದ್ದ ಮಗ ತನ್ನ ತಂದೆ-ತಾಯಿಯ ಮೇಲೆ ಎರಗಿ ದೊಣ್ಣೆಯಿಂದ ಥಳಿಸಿದ್ದಾನೆ. ಇದರಿಂದ ಚಿಂತಾಜನಕ ಸ್ಥಿತಿಗೆ ತಲುಪಿದ ತಂದೆ-ತಾಯಿ ಇಬ್ಬರೂ ಸಾವನ್ನಪ್ಪಿದ್ದಾರೆ..

son-killed-his-parents-in-napoklu
ಪೋಷಕರ ಹತ್ಯೆ

By

Published : Aug 4, 2020, 8:09 PM IST

ನಾಪೋಕ್ಲು/ಕೊಡಗು :ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಹೆತ್ತ ವಯೋವೃದ್ದ ತಂದೆ-ತಾಯಿಯನ್ನು ದೊಣ್ಣೆಯಿಂದ ಥಳಿಸಿ ಹತ್ಯೆಗೈದ ಅಮಾನವೀಯ ಘಟನೆ ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ಕೋಕೇರೆ ಗ್ರಾಮದಲ್ಲಿ ನಡೆದಿದೆ.

ಮಡಿಕೇರಿ ಸಮೀಪದ ಕೋಕೇರಿ ಗ್ರಾಮದ‌ ನಿವಾಸಿಗಳಾದ ರಾಜ (70) ಮತ್ತು ಗೌರಿ (62) ಎಂಬುವರು ಮಗನಿಂದ ಹತ್ಯೆಗೀಡಾದ ನತದೃಷ್ಟರು. ಕೋಕೇರಿ ಗ್ರಾಮದ ಚೇನಂಡ ಶಿವಾಜಿ ಸೋಮಯ್ಯ ಅವರ ಲೈನ್ ಮನೆಯಲ್ಲಿ ಈ ಕೊಲೆಗಳಾಗಿವೆ.

ಸೋಮವಾರ ರಾತ್ರಿ ಕಂಠಪೂರ್ತಿ ಕುಡಿದಿದ್ದ ಅಯ್ಯಪ್ಪ (26) ತನ್ನ ತಂದೆ-ತಾಯಿಯ ಮೇಲೆ ಎರಗಿ ದೊಣ್ಣೆಯಿಂದ ಥಳಿಸಿದ್ದಾನೆ. ಇದರಿಂದ ಚಿಂತಾಜನಕ ಸ್ಥಿತಿಗೆ ತಲುಪಿದ ತಂದೆ-ತಾಯಿ ಸಾವನ್ನಪ್ಪಿದ್ದಾರೆ.

ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ABOUT THE AUTHOR

...view details