ಕರ್ನಾಟಕ

karnataka

ETV Bharat / state

ಅಮ್ಮನ ಜೊತೆ ಬಂದು ದಾರಿ ತಪ್ಪಿ ಕಿರು ಬಾವಿಗೆ ಬಿದ್ದ ಆನೆಮರಿ ರಕ್ಷಣೆ: ವಿಡಿಯೋ ನೋಡಿ.. - ಬಾವಿಗೆ ಬಿದ್ದ ಆನೆಮರಿ ವಿಡಿಯೋ

ತಾಯಿಯ ಜೊತೆ ಆಹಾರ ಹುಡುಕುತ್ತಾ ನಾಡಿಗೆ ಬಂದ ಆನೆಯೊಂದು ಅಮ್ಮನಿಂದ ಬೇರ್ಪಟ್ಟು ಕಾಫಿತೋಟದಲ್ಲಿ ನಿರ್ಮಿಸಲಾಗಿದ್ದ ಕಿರು ಬಾವಿಗೆ ಬಿದ್ದು ಪರದಾಡಿದ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಸ್ಥಳೀಯರು ಮತ್ತು ಅರಣ್ಯಾಧಿಕಾರಿಗಳು ಆನೆ ಮರಿ ಕತ್ತಿಗೆ ಹಗ್ಗ ಕಟ್ಟಿ ಬಾವಿಯಿಂದ ಮೇಲೆತ್ತಿ ರಕ್ಷಣೆ ಮಾಡಿದ್ದಾರೆ.

protection-of-an-elephant-cub-that-fell-into-the-well-in-kodagu
ಆನೆಮರಿ ರಕ್ಷಣೆ

By

Published : Jul 27, 2021, 4:33 PM IST

Updated : Jul 27, 2021, 6:41 PM IST

ಕೊಡಗು:ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಮರಿ ಕಾಡಾನೆಯೊಂದು ತಾಯಿಯಿಂದ ಬೇರ್ಪಟ್ಟು ಕಾಫಿತೋಟದಲ್ಲಿ ನಿರ್ಮಿಸಲಾಗಿದ್ದ ಚಿಕ್ಕ ಬಾವಿಗೆ ಬಿದ್ದು ಪರದಾಡಿದೆ. ಈ ಘಟನೆ ಜಿಲ್ಲೆಯ ವಿರಾಜಪೇಟೆ ತಾಲೂಕಿನ ದೇವರಪುರ ಗ್ರಾಮದಲ್ಲಿ ನಡೆದಿದೆ.

ಸುಭ್ರಮಣಿ ಎಂಬುವರ ಕಾಫಿತೋಟದಲ್ಲಿ ಇಂದು ಮುಂಜಾನೆ ಈ ಘಟನೆ ನಡೆದಿದೆ. ಆನೆ ಘೀಳಿಡುವ ಶಬ್ದ ಕೇಳಿ ಕಧಳಿ‌ ಮಾಲೀಕ ಸ್ಥಳಕ್ಕೆ ಬಂದು ನೋಡಿದ್ದಾಗ ಮರಿ ಆನೆ ಬಾವಿಗೆ ಬಿದ್ದಿದ್ದು ಗೊತ್ತಾಗಿದೆ. ಕೂಡಲೇ ಆರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಸ್ಥಳೀಯರ ಜೊತೆ ಸೇರಿ ಬಾಯಿಯ ಕಲ್ಲನನ್ನು ಮೇಲೆತ್ತಿ ಆನೆಗೆ ಬರಲು ಜಾಗ ಮಾಡಿದ್ದಾರೆ.

ದಾರಿ ತಪ್ಪಿ ಕಿರು ಬಾವಿಗೆ ಬಿದ್ದಿದ್ದ ಆನೆಮರಿ ರಕ್ಷಣೆ

ಆದ್ರೆ ಆನೆಗೆ ಬಾವಿ ಹತ್ತಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಆನೆಯ ಕತ್ತಿಗೆ ಹಗ್ಗ ಕಟ್ಟಿ ಮೇಲೆಳೆಯಲಾಯಿತು. ಕೆಲ ಘಂಟೆಗಳಿಂದ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಆನೆ ಮರಿ ಕೊನೆಗೆ ಬದುಕಿದೆ ಎಂದು ಕಾಫಿತೋಟದ ಒಳಗೆ ಓಡಿ ಹೋಯಿತು.

ಜಿಲ್ಲೆಯಲ್ಲಿ ಮಾನ‌ವ ಮತ್ತು ಕಾಡಾನೆಗಳ‌ ಸಂಘರ್ಷ ಹೆಚ್ಚಾಗುತ್ತಿದೆ. ಕೆಲವು ಆನೆಗಳು ಕಾಫಿತೋಟದಲ್ಲಿ ಮೃತಪಡುತ್ತಿವೆ. ಅಲ್ಲದೆ ಕಾಡಾನೆಗಳ ದಾಳಿಗೆ ಮನುಷ್ಯರು ಕೂಡಾ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇನ್ನು ಮುಂದೆಯಾದ್ರೂ ಅರಣ್ಯ ಇಲಾಖೆ ಕಾಡಾನೆಗಳು ನಾಡಿಗೆ ಬರುವುದನ್ನು ತಡೆಯಬೇಕು ಎಂಬುದು ಸ್ಥಳೀಯರ ಆಗ್ರಹ.

Last Updated : Jul 27, 2021, 6:41 PM IST

ABOUT THE AUTHOR

...view details