ವಿರಾಜಪೇಟೆ: ಕೆದಮುಳ್ಳೂರು ಗ್ರಾಮದಲ್ಲಿ ಕಾಡು ಕುರಿಯನ್ನು ಬೇಟೆಯಾಡಿದ ಓರ್ವನನ್ನು ಅರಣ್ಯಾಧಿಕಾರಿಗಳು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಸಾಮಗ್ರಿ ಹಾಗೂ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.
ಕೆದಮುಳ್ಳೂರು ಗ್ರಾಮದಲ್ಲಿ ಕಾಡುಕುರಿ ಬೇಟೆ: ಓರ್ವನ ಬಂಧನ - ವಿರಾಜಪೇಟೆ ಕಾಡು ಕುರಿ ಬೇಟೆ
ಕೆದಮುಳ್ಳೂರು ಗ್ರಾಮದಲ್ಲಿ ಕಾಡು ಕುರಿಯನ್ನು ಬೇಟೆಯಾಡಿದ ಓರ್ವನನ್ನು ಬಂಧಿಸಿ, ಅಂದಾಜು ಮೂರು ಕೆ.ಜಿ.ಗೂ ಅಧಿಕ ಕಾಡು ಕುರಿಯ ಮಾಂಸ ವಶಪಡಿಸಿಕೊಳ್ಳಲಾಗಿದೆ.
![ಕೆದಮುಳ್ಳೂರು ಗ್ರಾಮದಲ್ಲಿ ಕಾಡುಕುರಿ ಬೇಟೆ: ಓರ್ವನ ಬಂಧನ One arrested who haunted the wild goat](https://etvbharatimages.akamaized.net/etvbharat/prod-images/768-512-05:19:21:1595332161-kn-kdg-01-07-20-wild-goat-av-10027-21072020080207-2107f-1595298727-1108.jpg)
One arrested who haunted the wild goat
ವಿಶ್ವನಾಥ ಎಂಬಾತನೇ ಬಂಧಿತ ಆರೋಪಿ. ಈತನ ಬಗ್ಗೆ ಖಚಿತ ಸುಳಿವಿನ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದಾಗ ಅಂದಾಜು ಮೂರು ಕೆ.ಜಿ.ಗೂ ಅಧಿಕ ಕಾಡು ಕುರಿಯ ಮಾಂಸ ಲಭಿಸಿದೆ. ಜೊತೆಗೆ ಕೃತ್ಯಕ್ಕೆ ಬಳಸಿದ್ದ ಸಾಮಗ್ರಿ ಹಾಗೂ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.