ಮಡಿಕೇರಿ: ಕೊಡಗಿನಲ್ಲಿ ನಕ್ಸಲ್ ಚಟುವಟಿಕೆ ಆರೋಪದಡಿ ಬಂಧನಕ್ಕೊಳಗಾಗಿರುವ ನಕ್ಸಲ್ ನಾಯಕ ರೂಪೇಶ್ ಅವರನ್ನು ಮಡಿಕೇರಿ ನ್ಯಾಯಾಲಯಕ್ಕೆ ಮಂಗಳವಾರ ಹಾಜರುಪಡಿಸಲು ಕರೆತರಲಾಗಿತ್ತು. ಆ ವೇಳೆ ಅವರು ಕೋರ್ಟ್ ಆವರಣದಲ್ಲೇ ಜಿಲ್ಲೆಯ ಪಶ್ಚಿಮ ಘಟ್ಟದ ಪರ ಘೋಷಣೆ ಕೂಗುವ ಮೂಲಕ ಪರಿಸರ ಕಾಳಜಿ ಮೆರೆದಿದ್ದಾರೆ.
ಮಡಿಕೇರಿ ಕೋರ್ಟ್ ಆವರಣದಲ್ಲೇ ಪಶ್ಚಿಮ ಘಟ್ಟದ ಪರ ನಕ್ಸಲ್ ನಾಯಕನ ಘೋಷಣೆ - ಪ್ರಾಕೃತಿಕ ವಿಕೋಪ
ನಕ್ಸಲ್ ಚಟುವಟಿಕೆಗಳ ಆರೋಪದಡಿ ಬಂಧಿತರಾಗಿರುವ ರೂಪೇಶ್ ಇಂದು ಮಡಿಕೇರಿ ನ್ಯಾಯಾಲಯಕ್ಕೆ ಕರೆ ತಂದಾಗ ಪರಿಸರದ ಮೇಲೆ ಮನುಷ್ಯನ ಅಟ್ಟಹಾಸವೇ ಪ್ರಾಕೃತಿಕ ವಿಕೋಪಕ್ಕೆ ಕಾರಣವೆಂದು ಆರೋಪಿಸಿದರು. ಅಲ್ಲದೆ, ಪಶ್ವಿಮ ಘಟ್ಟ ಉಳಿಸುವಂತೆ ಘೋಷಣೆ ಕೂಗಿದ್ರು.

ನಕ್ಸಲ್ ಆರೋಪಿ ರೂಪೇಶ್ ಘೋಷಣೆ ಕೂಗುತ್ತಿರುವುದು
ನಕ್ಸಲ್ ಆರೋಪಿ ರೂಪೇಶ್ ಘೋಷಣೆ ಕೂಗುತ್ತಿರುವುದು
ನಕ್ಸಲ್ವಾದಿ ಜಿಂದಾಬಾದ್, 'Natural calamities are man made'( ಪ್ರಾಕೃತಿಕ ವಿಕೋಪಗಳು ಮಾನವ ನಿರ್ಮಿತ) ಹಾಗೂ Fight for Western Ghats to protect(ಪಶ್ಚಿಮ ಉಳಿಸಲು ಹೋರಾಡಿ) ಎಂದು ಆಂಗ್ಲಭಾಷೆಯಲ್ಲಿ ಕರೆ ನೀಡಿದರು. ಅಲ್ಲದೆ, ನಕ್ಸಲರು ದೇಶ ಭಕ್ತರು ಅಂತಾ ಘೋಷಣೆಯನ್ನು ಮೊಳಗಿಸಿದರು.
ನಕ್ಸಲ್ ಚಟುವಟಿಕೆ ಪ್ರಕರಣದ ವಿಚಾರಣೆಯನ್ನು ಆಗಸ್ಟ್ 31ಕ್ಕೆನ್ಯಾಯಾಧೀಶರುಮುಂದೂಡಿದರು.