ಕರ್ನಾಟಕ

karnataka

By

Published : Aug 11, 2020, 1:47 PM IST

Updated : Aug 11, 2020, 2:54 PM IST

ETV Bharat / state

ಮಕ್ಕಳು ಹೇಳಿದ್ದರೂ ಅರ್ಚಕ ಆಚಾರ್​ ಮನೆ ಬಿಟ್ಟು ಬಾರದಿರಲು ಕಾರಣವೇನು?

ಅರ್ಚಕ ಮತ್ತು ಕೃಷಿಕರಾದ್ದರಿಂದ ನಾರಾಯಣ ಆಚಾರ್, ಸಹಜವಾಗಿಯೇ ಸಂಪತ್ತು ಹೊಂದಿರಬಹುದು ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Narayana Achar Property, Narayana Achar Property issue, Narayana Achar Property news, Narayana Achar Property latest news, Bramhagiri hill collapse, Bramhagiri hill collapse news,  ನಾರಾಯಣ ಆಚಾರ್ ಆಸ್ತಿ, ನಾರಾಯಣ ಆಚಾರ್ ಆಸ್ತಿ ವಿವಾದ, ನಾರಾಯಣ ಆಚಾರ್ ಆಸ್ತಿ ಬಗ್ಗೆ ಸ್ಥಳೀಯರ ಪ್ರತಿಕ್ರಿಯೆ,  ನಾರಾಯಣ ಆಚಾರ್ ಆಸ್ತಿ ಸುದ್ದಿ,
ಅರ್ಚಕ, ಕೃಷಿಕರಾದ್ದರಿಂದ ನಾರಾಯಣ ಆಚಾರ್ ಸಂಪತ್ತು ಹೊಂದಿರಬಹುದು

ಕೊಡಗು (ತಲಕಾವೇರಿ): ಕಣ್ಮರೆಯಾಗಿರುವ ನಾರಾಯಣ ಆಚಾರ್ ಮೂಲತಃ ಅರ್ಚಕ ಹಾಗೂ ಕೃಷಿಕ ಕುಟುಂಬದವರು. ಹೀಗಾಗಿ ಅವರು ಸಂಪತ್ತು ಹೊಂದಿರಬಹುದು ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮನೆಯೊಂದಿಗೆ ಹೊಂದಿದ್ದ ಭಾವನಾತ್ಮಕ ಸಂಬಂಧ ಕೂಡ ಅವರು ಮನೆ ಬಿಟ್ಟು ತೆರಳಲು ನಿರಾಕರಿಸಿರಬಹುದು ಎನ್ನಲಾಗುತ್ತಿದೆ.

ಸ್ಥಳೀಯರ ಪ್ರತಿಕ್ರಿಯೆ

ನಾರಾಯಣ ಆಚಾರ್​ಗೆ ಕಾಫಿ, ಏಲಕ್ಕಿ ತೋಟವಿದೆ. ಹಾಗೆಯೇ ಅವರ ಕುಟುಂಬ ತಲತಲಾಂತರದಿಂದ ಅರ್ಚಕ ವೃತ್ತಿ ಮಾಡುತ್ತಿದೆ. ಅಲ್ಲದೆ ಮಕ್ಕಳಿಬ್ಬರು ವಿದೇಶದಲ್ಲಿ ಇರುವುದರಿಂದ ಸಹಜವಾಗಿಯೇ ಅವರ ಬಳಿ ಆಸ್ತಿ ಇರಬಹುದು ಎಂಬುದು ಸ್ಥಳೀಯ ನಿವಾಸಿ ಸಂಜಯ್​ ಅಭಿಪ್ರಾಯ.

ಕೆಲವರು ಮಾತನಾಡಿಕೊಳ್ಳುವ ರೀತಿಯಲ್ಲಿ ಅವರಿಗೆ ಅಷ್ಟು ಪ್ರಮಾಣದ ಆಸ್ತಿ ಇಲ್ಲದಿರಬಹುದು.ಮಕ್ಕಳು ಅವರಿಗೆ ಮನೆಬಿಟ್ಟು ಹೇಳಿದರೂ ಸಹ ಮನೆಯೊಂದಿಗಿನ ನಂಟನ್ನು ಬಿಡಲು ಆಗದಿದ್ದರಿಂದ ಈ ಅನಾಹುತ ಸಂಭವಿಸಿದೆ ಎಂಬುದು ಸಂಜಯ್​ ಅನಿಸಿಕೆ.

Last Updated : Aug 11, 2020, 2:54 PM IST

ABOUT THE AUTHOR

...view details