ಕರ್ನಾಟಕ

karnataka

ETV Bharat / state

ಭೂಕುಸಿತದ ಆತಂಕದಲ್ಲಿ ಜನತೆ : ಬೆಟ್ಟ ಕುಸಿತದ ವಿಚಾರ ಮುಚ್ಚಿಡುತ್ತಿರುವ ರಿಯಲ್ ಎಸ್ಟೇಟ್ ಮಾಫಿಯಾ? - ಈಟಿವಿ ಭಾರತ್​ ಕನ್ನಡ

ಕೊಡಗಿನಲ್ಲಿ 2018ರ ರೀತಿಯಲ್ಲೇ ಈ ಬಾರಿಯೂ ಮದೆನಾಡಿನ ಹುಲು ಕಜೆ ಬೆಟ್ಟದಲ್ಲಿ ಭೂ ಕುಸಿತ ಉಂಟಾಗಿದೆ. ಆದರೆ, ಈ ಬಗ್ಗೆ ರಿಯಲ್ ಎಸ್ಟೇಟ್ ಮಾಫಿಯಾದವರು ಕುಸಿತವಾಗಿಲ್ಲ ಎಂದು ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ. ಇದರ ಹಿಂದೆ ದೊಡ್ಡ ದಂಧೆ ಅಡಗಿದೆ ಎಂಬ ಆರೋಪ ಕೇಳಿ ಬಂದಿದೆ.

landslide
ಭೂ ಕುಸಿತದ

By

Published : Jul 29, 2022, 6:01 PM IST

ಕೊಡಗು : ಜಿಲ್ಲೆಯ ಮದೆನಾಡಿನ ಹುಲುಕಜೆ ಬೆಟ್ಟದಲ್ಲಿ ಜಲಸ್ಫೋಟಗೊಂಡಿರೊದು ಎಲ್ಲರಿಗೂ ತಿಳಿದ ವಿಚಾರ. ಹೀಗಾಗಿ, ಈ ಭಾಗದ ಜನತೆ ಬಹಳ ಆತಂಕದಲ್ಲಿದ್ದಾರೆ. ಆದರೆ ಕೆಲವೊಂದು ರಿಯಲ್​​ ಎಸ್ಟೇಟ್ ಮಾಫಿಯಾಗಳು ಮಾತ್ರ ತಮ್ಮ ಲಾಭಕ್ಕೋಸ್ಕರ ಈ ಭಾಗದಲ್ಲಿ ಜಲಸ್ಫೋಟವಾಗಿಲ್ಲ ಎಂಬ ಪ್ರಚಾರ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಮದೆನಾಡುವಿನ ಹುಲುಕಜೆ ಬೆಟ್ಟದಲ್ಲಿ ಕಳೆದ ಒಂದು ವಾರದ ಹಿಂದೆ ಜಲಸ್ಫೋಟವಾಗಿ 4 ರಿಂದ 5 ಎಕರೆಗೂ ಹೆಚ್ಚಿನ ಭೂಮಿ ಕುಸಿದು ಹೋಗಿದೆ. 2018ರಲ್ಲಿ ಉಂಟಾದ ಗುಡ್ಡ ಕುಸಿತದ ರೀತಿಯಲ್ಲಿ ಈ ಬಾರಿಯೂ ಜಲ ಸ್ಫೋಟಗೊಂಡಿದೆ. ಇದರಿಂದ ಯಾರಿಗೂ ಅಪಾಯವೇನು ಆಗಿಲ್ಲ. ಆದರೆ, ಬೆಟ್ಟ ಕುಸಿದ ಕೆಳಭಾಗದಲ್ಲಿ ಸಾಕಷ್ಟು ಮನೆಗಳು ಕೂಡ ಇವೆ.

ಭೂ ಕುಸಿತದ ಆತಂಕದಲ್ಲಿ ಗ್ರಾಮದ ಜನತೆ

ಅಪಾಯದ ಅಂಚಿನಲ್ಲಿ ಇರುವವರನ್ನ ಮುಂಜಾಗ್ರತಾ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿದೆ. ಆದರೆ, ಇನ್ನಷ್ಟೂ ಬೆಟ್ಟ ಜರಿದಲ್ಲಿ ರಾಷ್ಟ್ರೀಯ ಹೆದ್ದಾರಿ 275ರ ಜೋಡ್ಪಾಲಕ್ಕೂ ಅಪಾಯ ಇದೆ. ಒಂದಷ್ಟು ಮಂದಿ ಅಪಾಯದ ಅಂಚಿನಲ್ಲಿದ್ದು ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.

ಬೆಟ್ಟ ಕುಸಿತವಾದ ಪ್ರದೇಶಗಳಿಗೆ ಕೊಡಗಿನ ಜ‌ಪ್ರತಿನಿಧಿಗಳು ಹಾಗೂ ಕೊಡಗು ಉಸ್ತುವಾರಿ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಷ್ಟಾದರು ಕೂಡ ಒಂದಷ್ಟು ರಿಯಲ್ ಎಷ್ಟೇಟ್ ಮಾಫಿಯಾಗಳು ಇಲ್ಲಿ ಏನು ಆಗಿಲ್ಲ ಎಂದು ಹೇಳುತ್ತಿದ್ದಾರೆ. ಇದಕ್ಕೆ ಕಾರಣ ಎಂದರೆ ರಿಯಲ್ ಎಷ್ಟೆಟ್​​​ನವರು ಈ ಪ್ರದೇಶದ ಸುತ್ತಮುತ್ತಲಿನ ಜಾಗ ಮಾರಾಟ ಮಾಡಲು ಸಮಸ್ಯೆ ಆಗುತ್ತದೆ ಎನ್ನುತ್ತಾರೆ.

ಒಟ್ಟಿನಲ್ಲಿ ಅಪಾಯದಲ್ಲಿ‌ ಸಾಕಷ್ಟು ಮನೆಗಳಿದ್ದು ಇವರ ಒಂದು ಸುಳ್ಳು ಅಪಪ್ರಚಾರದಿಂದ ಒಂದು ವೇಳೆ ಸರ್ಕಾರದ ಪರಿಹಾರ ಸಿಗದಿದ್ದರೆ ಅನೇಕರು ವಂಚಿತರಾಗೋದು ಮಾತ್ರ ಗ್ಯಾರೆಂಟಿ.

ಇದನ್ನೂ ಓದಿ :ನಿಮ್ಮ ಜಮೀನಿನಲ್ಲಿ ಉಚಿತ ಕೊಳವೇ ಬಾವಿ ಕೊರೆಸಬೇಕೇ: ಈಗಲೇ ಅರ್ಜಿ ಸಲ್ಲಿಸಿ

ABOUT THE AUTHOR

...view details