ಕರ್ನಾಟಕ

karnataka

By

Published : May 11, 2020, 6:32 PM IST

ETV Bharat / state

ಕೊಡಗಿನಿಂದ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಒಳ ಮಾರ್ಗ ಬಂದ್​​​

ಕೊಡಗಿನಿಂದ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಕರಿಕೆ, ಕುಟ್ಟ, ಮಾಕುಟ್ಟ ಗಡಿಗಳನ್ನು ಭಾಗಮಂಡಲ ಠಾಣಾಧಿಕಾರಿಗಳು ಜೆಸಿಬಿ ಯಂತ್ರದ ಮೂಲಕ ರಸ್ತೆಗೆ ಮಣ್ಣು ಹಾಕಿ ಬಂದ್​ ಮಾಡಿದ್ದಾರೆ.

kodagu to kerala road closed
ಕೊಡಗು ಕೆರಳ ರಸ್ತೆ ಬಂದ್​

ಕೊಡಗು:ಕೊರೊನಾ ಹಿನ್ನೆಲೆ ಅಂತರ್​ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಬಂದ್ ಮಾಡಬೇಕೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿರುವ ಹಿನ್ನೆಲೆ ಜಿಲ್ಲೆಯಿಂದ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಒಳ ಮಾರ್ಗಗಳಿಗೆ ಮಣ್ಣು ಸುರಿದು ಬಂದ್ ಮಾಡಲಾಗಿದೆ.

ಕೇರಳಕ್ಕೆ ಸಂಪರ್ಕ ಕಲ್ಪಿಸುವ ಕರಿಕೆ, ಕುಟ್ಟ, ಮಾಕುಟ್ಟ ಗಡಿಗಳನ್ನು ಭಾಗಮಂಡಲ ಠಾಣಾಧಿಕಾರಿಗಳು ಜೆಸಿಬಿ ಯಂತ್ರದ ಮೂಲಕ ರಸ್ತೆಗೆ ಮಣ್ಣು ಹಾಕಿಸಿ ಬಂದ್​ ಮಾಡಿದ್ದಾರೆ.

ಕೊಡಗು ಹಾಗೂ ಕೇರಳದ ಕಾಸರಗೋಡು ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಕೇರಳ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಗೇರು ಪ್ಲಾಂಟೇಷನ್‌ಗೆ ಹಾದು ಹೋಗಿ ಪಾಣತ್ತೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಕೇರಳದಲ್ಲಿ ಗೇಟ್ ಇದೆ. ಆದರೂ ಕೂಡ ಕದ್ದುಮುಚ್ಚಿ ನಿಂತರವಾಗಿ ವಾಹನಗಳು ಓಡಾಡುವುದನ್ನು ಪತ್ತೆ ಹಚ್ಚಿದ ಅಧಿಕಾರಿಗಳು, ರಸ್ತೆ ಸಂಪರ್ಕ ಕಡಿತಗೊಳಿಸಿದ್ದಾರೆ.

ABOUT THE AUTHOR

...view details