ಕೊಡಗು (ಭಾಗಮಂಡಲ): ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ಭಾಗಮಂಡಲ ಬಹುತೇಕ ಜಲಾವೃತವಾಗುತ್ತಿದೆ. ಮೇಲ್ಸೇತುವೆ ಮುಳುಗಡೆಗೆ ಕೇವಲ 8 ಅಡಿಗಳಷ್ಟು ಮಾತ್ರ ಬಾಕಿ ಇದೆ.
ಕೊಡಗಿನಲ್ಲಿ ಅಬ್ಬರಿಸಿದ ವರುಣ, ತ್ರಿವೇಣಿ ಸಂಗಮ ಮುಳುಗಡೆ ಭೀತಿ - ಭಾಗಮಂಡಲ-ತಲಕಾವೇರಿ ರಸ್ತೆ ಸಂಪರ್ಕ ಕಡಿತ
ತಲಕಾವೇರಿ, ಬ್ರಹ್ಮಗಿರಿ, ಭಾಗಮಂಡಲ ಹಾಗೂ ನಾಪೋಕ್ಲು ಭಾಗದಲ್ಲಿ ವಿಪರೀತ ಮಳೆಯಾಗುತ್ತಿರುವುದರಿಂದ ತ್ರಿವೇಣಿ ಸಂಗಮ ಮುಳುಗಡೆಯಾಗುವ ಭೀತಿ ಎದುರಾಗಿದೆ. ಮಳೆ ಹೀಗೆ ಮುಂದುವರೆದ್ರೆ ಭಾಗಮಂಡಲ-ತಲಕಾವೇರಿ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಳ್ಳಲಿದೆ..
![ಕೊಡಗಿನಲ್ಲಿ ಅಬ್ಬರಿಸಿದ ವರುಣ, ತ್ರಿವೇಣಿ ಸಂಗಮ ಮುಳುಗಡೆ ಭೀತಿ Heavy rainfall in Kodagu district Fears of flooding](https://etvbharatimages.akamaized.net/etvbharat/prod-images/768-512-8871523-988-8871523-1600599879282.jpg)
ಕೊಡಗಿನಲ್ಲಿ ವರುಣಾರ್ಭಟ, ಮುಳುಗಡೆಯಾಗುವ ಭೀತಿಯಲ್ಲಿ ತ್ರಿವೇಣಿ ಸಂಗಮ
ಕೊಡಗಿನ ತ್ರಿವೇಣಿ ಸಂಗಮಮುಳುಗಡೆ ಭೀತಿ
ತಲಕಾವೇರಿ, ಬ್ರಹ್ಮಗಿರಿ, ಭಾಗಮಂಡಲ ಹಾಗೂ ನಾಪೋಕ್ಲು ಭಾಗದಲ್ಲಿ ವಿಪರೀತ ಮಳೆಯಾಗುತ್ತಿರುವುದರಿಂದ ತ್ರಿವೇಣಿ ಸಂಗಮ ಮುಳುಗಡೆಯಾಗುವ ಭೀತಿ ಎದುರಾಗಿದೆ. ಮಳೆ ಹೀಗೆ ಮುಂದುವರೆದ್ರೆ ಭಾಗಮಂಡಲ-ತಲಕಾವೇರಿ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಳ್ಳಲಿದೆ.
ಈಗಾಗಲೇ ನಾಪೋಕ್ಲು ರಸ್ತೆ ಮೇಲೆ 6 ಅಡಿಗಳಷ್ಟು ನೀರು ಹರಿಯುತ್ತಿದೆ. ಪ್ರವಾಹದ ನೀರಿನಲ್ಲೇ ಜನರು ನದಿಯನ್ನು ದಾಟುತ್ತಿದ್ದಾರೆ. ಹಾಗೆಯೇ, ಕಾವೇರಿ ನದಿ ತಟದ ಗ್ರಾಮಗಳಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಮತ್ತೊಮ್ಮೆ ಪ್ರವಾಹದ ಭೀತಿ ಸೃಷ್ಟಿಯಾಗಿದೆ.