ಕರ್ನಾಟಕ

karnataka

ವಿದ್ಯುತ್ ಸ್ಪರ್ಶ: ಸೋಮವಾರಪೇಟೆಯಲ್ಲಿ ಕಾಡಾನೆ ಸಾವು..!

By

Published : Nov 25, 2020, 4:39 PM IST

ಕಾಫಿ ತೋಟದ ವಿದ್ಯುತ್ ಬೇಲಿಗೆ ಸ್ಪರ್ಶಿಸಿದ ಕಾಡಾನೆಯೊಂದು ಮೃತಪಟ್ಟಿರುವ ಘಟನೆ ಸೋಮವಾರಪೇಟೆಯಲ್ಲಿ ನಡೆದಿದೆ.

elephant-death
ಕಾಡಾನೆ ಸಾವು

ಸೋಮವಾರಪೇಟೆ (ಕೊಡಗು): ಕಾಫಿ ತೋಟಕ್ಕೆ ಆಹಾರ ಅರಸಿ ಬಂದ ಕಾಡಾನೆಯೊಂದು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವ ಘಟನೆ ತಾಲೂಕಿನ 7 ನೇ ಹೊಸಕೋಟೆ ಬಳಿ ನಡೆದಿದೆ.

ಸೋಮವಾರಪೇಟೆಯಲ್ಲಿ ಕಾಡಾನೆ ಸಾವು

ಸುಮಾರು 13 ವರ್ಷದ ಗಂಡಾನೆ ಸಾವನ್ನಪ್ಪಿದ್ದು, ಕಾಫಿ ತೋಟದ ಸುತ್ತಲೂ ಅಳವಡಿಸಿದ್ದ ವಿದ್ಯುತ್ ಬೇಲಿಗೆ ಸ್ಪರ್ಶಿಸಿದ ಪರಿಣಾಮ ಈ ದುರ್ಘಟನೆ ನಡೆದಿದೆ. ಎರಡು ದಿನಗಳ ಹಿಂದೆಯೇ ಆನೆ ಮೃತಪಟ್ಟಿರಬಹುದು ಎಂದು ಅಂದಾಜಿಸಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಘಟನಾ ಸ್ಥಳಕ್ಕೆ ಆರ್‌ಎಫ್‌ಒ ಅನಿಲ್ ಡಿಸೋಜಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಾರದ ಹಿಂದಷ್ಟೇ ಪೊನ್ನಂಪೇಟೆಯ ಮಂಚಳ್ಳಿಯಲ್ಲಿ ವಿದ್ಯುತ್ ಸ್ಪರ್ಶಕ್ಕೆ ಕಾಡಾನೆ ಮೃತಪಟ್ಟಿತ್ತು.

ABOUT THE AUTHOR

...view details