ಕರ್ನಾಟಕ

karnataka

ETV Bharat / state

ಫೀಲ್ಡ್​ಗಿಳಿದು ಜಾಗೃತಿ ಮೂಡಿಸಿದ ಡಿಸಿ... ಕುಶಾಲನಗರದಲ್ಲಿ ನಿಯಮ ಉಲ್ಲಂಘಿಸಿದವರಿಗೆ ದಂಡ - D C Charulatha visits madikeri for corona control

ಮಡಿಕೇರಿ, ಸುಂಟಿಕೊಪ್ಪ ಹಾಗೂ ಕುಶಾಲನಗರಕ್ಕೆ ಭೇಟಿ ನೀಡಿದ ಡಿಸಿ ಚಾರುಲತ ಸೋಮಲ್, ಮಾಸ್ಕ್ ಹಾಕದಿರುವವರಿಗೆ ದಂಡ ವಿಧಿಸಿ ತಿಳಿಹೇಳಿದ್ದಾರೆ.

d-c-charulatha-visits-madikeri-to-make-awerness-about-corona
ಫೀಲ್ಡ್​ಗಿಳಿದು ಜಾಗೃತಿ ಮೂಡಿಸಿದ ಡಿಸಿ

By

Published : Apr 21, 2021, 3:56 PM IST

ಕೊಡಗು: ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದು, ಸೋಂಕನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಮಿಶ್ರ ಅವರು ಫೀಲ್ಡ್​​​ಗೆ ಇಳಿದು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.

ಫೀಲ್ಡ್​ಗಿಳಿದು ಜಾಗೃತಿ ಮೂಡಿಸಿದ ಡಿಸಿ

ಮಡಿಕೇರಿ, ಸುಂಟಿಕೊಪ್ಪ ಹಾಗೂ ಕುಶಾಲನಗರಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಮಾಸ್ಕ್ ಹಾಕದಿರುವವರಿಗೆ ಮಾಸ್ಕ್ ಧರಿಸುವಂತೆ ಸೂಚಿಸಿ, ನಿಯಮ ಉಲ್ಲಂಘಿಸಿದವರಿಗೆ ಸ್ಥಳದಲ್ಲಿಯೇ ದಂಡ ವಿಧಿಸಿದರು. ಹಾಗೆಯೇ, ಸಾರ್ವಜನಿಕ ಸ್ಥಳ ಹಾಗೂ ಅಂಗಡಿಗಳಲ್ಲಿ ಕೋವಿಡ್ ನಿಯಮ ಪಾಲಿಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಿ, ಕೋವಿಡ್ ನಿಯಮ ಪಾಲಿಸದಿರುವ ಅಂಗಡಿಗಳನ್ನು‌ ಮುಚ್ಚಿಸಿದರು.

ವಿಪತ್ತು ಕಾಯ್ದೆಯಡಿ ಪ್ರಕರಣ ದಾಖಲಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಡಿಸಿ, ಕುಶಾಲನಗರದ ರಥ ಬೀದಿಯಲ್ಲಿ ಸಂಚಾರ ಮಾಡಿ ಕೋವಿಡ್ ನಿಯಮ ಪಾಲನೆ ಮಾಡದ 10ಕ್ಕೂ ಹೆಚ್ಚು ಅಂಗಡಿಗಳಿಗೆ ಬೀಗ ಹಾಕಿಸಿದರು. ನಂತರ ಪ್ರವಾಸಿ ಸ್ಥಳ ನಿಸರ್ಗಧಾಮಕ್ಕೆ ಭೇಟಿ ನೀಡಿ ಪ್ರವಾಸಿಗರಿಗೆ ಕೋವಿಡ್ ನಿಯಮ ಪಾಲಿಸುವಂತೆ ತಿಳಿಹೇಳಿ ದಂಡ ವಿಧಿಸಿದರು.

ಓದಿ:ಹೈಕೋರ್ಟ್ ಅದೇಶದಿಂದ ಎಚ್ಚೆತ್ತ ಸಾರಿಗೆ ನೌಕರರು: ಒಬ್ಬೊಬ್ಬರಾಗಿ ಕರ್ತವ್ಯಕ್ಕೆ ಹಾಜರು

ABOUT THE AUTHOR

...view details