ಕೊಡಗು:ಕೊರೊನಾ ಸೋಂಕಿತ ವ್ಯಕ್ತಿ ತಾನು ಪ್ರಯಾಣ ಬೆಳೆಸಿದ್ದ ಬಗ್ಗೆ ದಿನಕ್ಕೊಂದು ಹೇಳಿಕೆಗಳನ್ನು ಕೊಡುತ್ತಿದ್ದು, ಇದು ಜಿಲ್ಲಾಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿದೆ.
ದಿನಕ್ಕೊಂದು ತಾರೀಖು ಹೇಳುತ್ತಿರುವ ಕೊರೊನಾ ಸೋಂಕಿತ..! - ಪ್ರಯಾಣ ಬೆಳೆಸಿದ್ದ ದಿನಾಂಕ ಕುರಿತು ದಿನಕ್ಕೊಂದು ಹೇಳಿಕೆ
ಕೊಡಗಿನ ಕೊರೊನಾ ಸೋಂಕಿತ ವ್ಯಕ್ತಿ ತಾನು ಪ್ರಯಾಣ ಬೆಳೆಸಿದ್ದ ದಿನಾಂಕ ಕುರಿತು ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಿದ್ದಾನೆಂದು ಜಿಲ್ಲಾಧಿಕಾರಿ ಅನೀಸ್ ಕೆ. ಜಾಯ್ ತಿಳಿದ್ದಾರೆ.
![ದಿನಕ್ಕೊಂದು ತಾರೀಖು ಹೇಳುತ್ತಿರುವ ಕೊರೊನಾ ಸೋಂಕಿತ..! Corona infected person](https://etvbharatimages.akamaized.net/etvbharat/prod-images/768-512-6483928-thumbnail-3x2-bng.jpg)
ಸೋಂಕಿತ ಸುತ್ತಾಡಿದ್ದ ಬಗ್ಗೆ ಮತ್ತಷ್ಟು ಮಾಹಿತಿ ಸಂಗ್ರಹಿಸಿರುವ ಜಿಲ್ಲಾಡಳಿತ ಆತ ಬೆಂಗಳೂರಿನ ವಿಮಾನ ನಿಲ್ದಾಣದಿಂದ, ಕೆ.ಎ 57 ಎಫ್ 0908 ಸಂಖ್ಯೆಯ ವಾಯು ವಜ್ರ ಬಸ್ನಲ್ಲಿ ಮಾರ್ಚ್ 15 ರ ಸಂಜೆ 5.30 ಕ್ಕೆ ಹೊರಟು 6.45 ಕ್ಕೆ ಸ್ಯಾಟಲೈಟ್ ಬಸ್ ನಿಲ್ದಾಣ ತಲುಪಿದ್ದ.
ಸ್ಯಾಟಲೈಟ್ ಬಸ್ ನಿಲ್ದಾಣದಿಂದ KA57 F 0908 ಸಂಖ್ಯೆಯ ರಾಜಹಂಸ ಬಸ್ಸಿನಲ್ಲಿ ಮಾರ್ಚ್ 16ರ ಮುಂಜಾನೆ 12.05 ನಿಮಿಷಕ್ಕೆ ಹೊರಟು, ಮಂಡ್ಯ- ಮೈಸೂರು ವಿರಾಜಪೇಟೆ ಮಾರ್ಗವಾಗಿ ಮುಂಜಾನೆ ಮಡಿಕೇರಿಗೆ ಬಂದಿದ್ದ. ಸಹ ಪ್ರಯಾಣಿಕರು ಈ ಬಸ್ನಲ್ಲಿ ಸಂಚರಿಸಿದ್ದರೆ ಕೂಡಲೇ ಆರೋಗ್ಯ ತಪಾಸಣೆಗೆ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಅನೀಸ್ ಕೆ. ಜಾಯ್ ಮನವಿ ಮಾಡಿದ್ದಾರೆ.