ಕರ್ನಾಟಕ

karnataka

ETV Bharat / state

ಗಡಿಯಲ್ಲಿ ಹಕ್ಕಿ ಜ್ವರ ಆತಂಕ: ಕ್ರಿಮಿನಾಶಕ ಸಿಂಪಡಣೆ - ಗಡಿಯಲ್ಲಿ ಹಕ್ಕಿ ಜ್ವರ ಆತಂಕ

ಈಗಾಗಲೇ ಕೊರೊನಾ ಸೋಂಕಿನ ಆತಂಕದಲ್ಲಿರುವ ರಾಜ್ಯಕ್ಕೆ ಹಕ್ಕಿ ಜ್ವರ ಭೀತಿ ಕಾಡುತ್ತಿದೆ. ‌ಮಂಜಿನ ನಗರಿ ಕೊಡಗಿಗೆ ಹೊಂದಿಕೊಂಡಿರುವ ಕೇರಳ ರಾಜ್ಯದ ಗಡಿ ಭಾಗದಲ್ಲಿ ಪಶು ಪಾಲನಾ ಹಾಗೂ ಪೊಲೀಸ್ ಇಲಾಖೆ ಆಶ್ರಯದಲ್ಲಿ ಚೆಕ್‌ಪೋಸ್ಟ್ ಕೇಂದ್ರಗಳನ್ನು ತೆರೆದು ಕೇರಳ ಗಡಿಯಿಂದ ಬರುವ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ.

bird-fever-in-border-district-in-kodagu
ಗಡಿಯಲ್ಲಿ ಹಕ್ಕಿ ಜ್ವರ ಆತಂಕ

By

Published : Mar 17, 2020, 11:48 PM IST

ಕೊಡಗು: ಈಗಾಗಲೇ ಕೊರೊನಾ ಸೋಂಕಿನ ಆತಂಕದಲ್ಲಿರುವ ರಾಜ್ಯಕ್ಕೆ ಹಕ್ಕಿ ಜ್ವರ ಭೀತಿ ಕಾಡುತ್ತಿದೆ. ‌ಮಂಜಿನ ನಗರಿ ಕೊಡಗಿಗೆ ಹೊಂದಿಕೊಂಡಿರುವ ಕೇರಳ ರಾಜ್ಯದ ಗಡಿ ಭಾಗದಲ್ಲಿ ಪಶು ಪಾಲನಾ ಹಾಗೂ ಪೊಲೀಸ್ ಇಲಾಖೆ ಆಶ್ರಯದಲ್ಲಿ ಚೆಕ್‌ಪೋಸ್ಟ್ ಕೇಂದ್ರಗಳನ್ನು ತೆರೆದು ಕೇರಳ ಗಡಿಯಿಂದ ಬರುವ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ.

ಗಡಿಯಲ್ಲಿ ಹಕ್ಕಿ ಜ್ವರ ಆತಂಕ

ಈ ಸಂಬಂಧ ಗಡಿ ಭಾಗಗಳಲ್ಲಿ ಅಲರ್ಟ್ ಘೋಷಿಸಿದೆ. ವಿರಾಜಪೇಟೆ ತಾಲೂಕಿನ ಮಾಕುಟ್ಟ, ಪೆರುಂಬಾಡಿ ಮತ್ತು ಮಡಿಕೇರಿಯ ಕರಿಕೆ ಸೇರಿದಂತೆ ವಿವಿಧೆಡೆ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ, ಕೇರಳದಿಂದ ಬರುವ ಕೋಳಿ ಹಾಗೂ ಅದರ ಉತ್ಪನ್ನಗಳು ಪ್ರವೇಶಿಸದಂತೆ ಮುನ್ನೆಚ್ವರಿಕೆ ವಹಿಸಲಾಗಿದೆ.

ಪಶು ವೈದ್ಯಾಧಿಕಾರಿ ಡಾ.ಶಾಂತೇಶ್ ನೇತೃತ್ವದ ತಂಡ ಪೆರುಂಬಾಡಿ ಚೆಕ್​ಪೋಸ್ಟ್‌ ಬಳಿ ಕೇರಳದಿಂದ ಬರುತ್ತಿರುವ ಎಲ್ಲ ವಾಹನಗಳಿಗೆ ಕ್ರಿಮಿನಾಶಕ ಸಿಂಪಡಿಸಿ, ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಹಕ್ಕಿಜ್ವರ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಕೊರೊನಾ ಆತಂಕದ ನಡುವೆ ಕುಕ್ಕುಟೋದ್ಯಮವನ್ನು ನಂಬಿ ಜೀವನ ಸಾಗಿಸುತ್ತಿರುವವರಿಗೆ ಹಕ್ಕಿಜ್ವರ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.

ABOUT THE AUTHOR

...view details