ಕೊಡಗು :ಚಿಪ್ಸ್ ರೇಟ್ ಕಡಿಮೆ ಮಾಡಿಲ್ಲ ಎಂದು ಬೇಕರಿ ಮಾಲಿಕನಿಗೆ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿ ಹಲ್ಲೆ ಮಾಡಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಹಲ್ಲೆ ಮಾಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ಪಟ್ಟಣದಲ್ಲಿರುವ ಚಿಪ್ಸ್ ಅಂಗಡಿ ಹಾಗೂ ಬೇಕರಿಗೆ ನುಗ್ಗಿ ಪುರ ಸಭಾ ಸದಸ್ಯ ಹಲ್ಲೆ ಮಾಡಿದ್ದು ವಿರಾಜಪೇಟೆ ಪೋಲಿಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ವಿರಾಜಪೇಟೆ ಪುರಸಭೆ ಸದಸ್ಯ ಪೃಥ್ವಿನಾಥ್ ಮತ್ತು ಅವರ ನೌಕರ ಕುಮಾರ್ ಎಂಬುವವನು ಬೇಕರಿಗೆ ನುಗ್ಗಿ ಗೂಂಡಾಗಿರಿ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಬೇಕರಿ ಒಳಗೆ ಗಲಾಟೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕ್ಯಾಮರಾದ ವಿಡಿಯೋ ಆಧರಿಸಿ ಬೇಕರಿ ಮಾಲೀಕ ಕಾರ್ತಿಕ್ ಪೊಲೀಸರಿಗೆ ದೂರು ನೀಡಿದ್ದಾರೆ.
ವಿರಾಜಪೇಟೆಯಲ್ಲಿ ಬೇಕರಿ ಮಾಲೀಕ ಒಂದು ವರ್ಷದಿಂದ ವ್ಯಾಪಾರ ಮಾಡುತ್ತಿದ್ದಾರೆ. ಎಂದಿನಂತೆ ಬೇಕರಿಗೆ ಬಂದ ಸದಸ್ಯ ಲೈಸೆನ್ಸ್ ತೋರಿಸುವಂತೆ ಹೇಳಿದ್ದಾರೆ. ತೋರಿಸುವ ಮೊದಲೇ ಸದಸ್ಯ ಏಕಾ ಏಕಿ ಹಲ್ಲೆ ಮಾಡಿದ್ದಾರೆ. ಲೈ ಲೈಸೆನ್ಸ್ ಇದ್ದರೂ ಕೂಡ ಪರವಾನಗಿ ಪಡೆದಿಲ್ಲ ಎಂದು ಹಲ್ಲೆ ಮಾಡಿದ್ದಾರೆ ಎಂದು ಕಾರ್ತಿಕ್ ಆರೋಪ ಮಾಡಿದ್ದಾರೆ.