ಕರ್ನಾಟಕ

karnataka

ETV Bharat / state

ಅನಾರೋಗ್ಯದಿಂದ ಮನನೊಂದ ನಿವೃತ್ತ ಯೋಧ ಆತ್ಮಹತ್ಯೆ

‌ಚೋಣಕೆರೆ ಗ್ರಾಮದ ನಿವಾಸಿ ಉತ್ತಯ್ಯ ಎಂಬ ನಿವೃತ್ತ ಯೋಧ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲವು ವರ್ಷಗಳಿಂದ ಇವರು ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By

Published : Jun 11, 2020, 11:01 PM IST

A retired soldier commits suicide by shooting himself because of illness
ಅನಾರೋಗ್ಯ ಕಾರಣ ಮನನೊಂದು ಗುಂಡು ಹಾರಿಸಿಕೊಂಡು ನಿವೃತ್ತ ಯೋಧ ಆತ್ಮಹತ್ಯೆ

ನಾಪೋಕ್ಲು (ಕೊಡಗು): ಅನಾರೋಗ್ಯ ಹಿನ್ನೆಲೆ ನಿವೃತ್ತ ಯೋಧರೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ಚೋಣಕೆರೆ ಗ್ರಾಮದಲ್ಲಿ ನಡೆದಿದೆ.

ಅನಾರೋಗ್ಯ ಕಾರಣ ಮನನೊಂದು ಗುಂಡು ಹಾರಿಸಿಕೊಂಡು ನಿವೃತ್ತ ಯೋಧ ಆತ್ಮಹತ್ಯೆ

‌ಚೋಣಕೆರೆ ಗ್ರಾಮದ ನಿವಾಸಿ ಉತ್ತಯ್ಯ (74) ಆತ್ಮಹತ್ಯೆ ‌ಮಾಡಿಕೊಂಡ ನಿವೃತ್ತ ಯೋಧ ಎಂದು ತಿಳಿದು ಬಂದಿದೆ. ನಿವೃತ್ತಿಯ ನಂತರ ಹಲವು ವರ್ಷಗಳಿಂದ ಚೋಣಕೆರೆ ಗ್ರಾಮದಲ್ಲಿ ಜೀವನ ನಡೆಸುತ್ತಿದ್ದರು. ಅಲ್ಲದೆ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಸಿಪಿಐ ದಿವಾಕರ್, ಎಸ್ಐ ಕಿರಣ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details