ಕರ್ನಾಟಕ

karnataka

By

Published : May 10, 2020, 6:19 PM IST

ETV Bharat / state

ಆಗ ಆಟೋ ಓಡಿಸ್ತಿದ್ದ ವ್ಯಕ್ತಿ ಈಗ 200 ಆಟೋಚಾಲಕರಿಗೆ ಆಹಾರದ ಕಿಟ್​ ವಿತರಿಸಿದರು!!

ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಮೂಲಕ ಆಟೋ ಚಾಲಕರಿಗೆ ಕಿಟ್ ವಿತರಣೆ ಮಾಡಿಸಿದರು. ಕುಶಾಲನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿ, ಪ್ರತೀ ಆಟೋ ಚಾಲಕರಿಗೆ ಸ್ಯಾನಿಟೈಸರ್ ನೀಡಿದರು. ಬಳಿಕ ಸಾಮಾಜಿಕ ಅಂತರ ಕಾಯ್ದುಕೊಂಡೇ ಕಿಟ್ ವಿತರಣೆ ಮಾಡಿದರು.

distributes-food-for-auto-drivers
ಆಹಾರದ ಕಿಟ್ ವಿತರಿಸಿದ ಉಮಾಶಂಕರ್

ಕುಶಾಲನಗರ/ಕೊಡಗು : ಲಾಕ್​‘ಡೌನ್​ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಆಟೋ ಚಾಲಕರ ಸ್ಥಿತಿ ಕಂಡು ದಾನಿಯೊಬ್ಬರು 200 ಆಟೋ ಚಾಲಕರಿಗೆ ಒಂದು ಲಕ್ಷ ರೂಪಾಯಿ ಮೌಲ್ಯದ ಆಹಾರದ ಕಿಟ್​ಗಳನ್ನು​ ವಿತರಣೆ ಮಾಡಿ ಸಹಾಯ ಮಾಡಿದ್ದಾರೆ.

ಜಿಲ್ಲೆಯ ಕುಶಾಲನಗರದ ಉಮಾಶಂಕರ್ ಸ್ವತಃ ಆಟೋ ಚಾಲಕರಾಗಿದ್ದವರು. ಇದೀಗ ಇವರ ಆರ್ಥಿಕ ಸ್ಥಿತಿ ಸುಧಾರಣೆಯಾಗಿದೆ. ಕೊರೊನಾದಿಂದ ತಮ್ಮ ಸಹ ಉದ್ಯೋಗಿಗಳಾಗಿದ್ದ ಆಟೋ ಚಾಲಕರು ತೀವ್ರ ಸಮಸ್ಯೆಗೆ ಸಿಲುಕಿದ್ದನ್ನು ಕಂಡು ಒಂದು ಲಕ್ಷ ರೂ. ಮೌಲ್ಯದ ಆಹಾರ ಪದಾರ್ಥಗಳ ಕಿಟ್‌ಗಳನ್ನ ವಿತರಣೆ ಮಾಡಿದರು.

ಆಹಾರದ ಕಿಟ್ ವಿತರಿಸಿದ ಸಮಾಜ ಸೇವಕ ಉಮಾಶಂಕರ್..

ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಮೂಲಕ ಆಟೋ ಚಾಲಕರಿಗೆ ಕಿಟ್ ವಿತರಣೆ ಮಾಡಿಸಿದರು. ಕುಶಾಲನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿ, ಪ್ರತೀ ಆಟೋ ಚಾಲಕರಿಗೆ ಸ್ಯಾನಿಟೈಸರ್ ನೀಡಿದರು. ಬಳಿಕ ಸಾಮಾಜಿಕ ಅಂತರ ಕಾಯ್ದುಕೊಂಡೇ ಕಿಟ್ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಉಮಾಶಂಕರ್​, ಸಹಾಯ ಮಾಡಿ ಎಂದು ಜನರು ಕೇಳುವುದಿಲ್ಲ. ಆದರೆ, ಇಂತಹ ಸ್ಥಿತಿಯಲ್ಲಿ ಅರ್ಥ ಮಾಡಿಕೊಂಡು ತಮ್ಮ ಮನೆಗಳ ಸುತ್ತ ಮುತ್ತಲಿನ ಬಡವರಿಗೆ ಸಹಾಯ ಮಾಡುವಂತೆ ಮನವಿ ಮಾಡಿದರು.

ABOUT THE AUTHOR

...view details