ಕರ್ನಾಟಕ

karnataka

ಕ್ವಾರಂಟೈನ್ ಉಲ್ಲಂಘನೆ : ನಿಯಮ ಪಾಲಿಸುವಂತೆ ಅಧಿಕಾರಿಗಳ ತಾಕೀತು

ಮೈಸೂರಿನಿಂದ ಮಡಿಕೇರಿಗೆ ಬಂದಿದ್ದ ವ್ಯಕ್ತಿ ಕ್ವಾರಂಟೈನ್​ ಪಾಲಿಸದಿದ್ದ ಕಾರಣ ನಗರ ಸಭೆ ಅಧಿಕಾರಿಗಳು ಆ ವ್ಯಕ್ತಿಗೆ 14 ದಿನ ಕ್ವಾರಂಟೈನ್​​ನಲ್ಲಿ ಇರುವಂತೆ ಕ್ಲಾಸ್​​ ತೆಗೆದುಕೊಂಡಿದ್ದಾರೆ.

By

Published : May 9, 2020, 4:58 PM IST

Published : May 9, 2020, 4:58 PM IST

A man in violation of the Quarantine Law
ಕ್ವಾರಂಟೈನ್ ಉಲ್ಲಂಘನೆ : ನಿಯಮ ಪಾಲಿಸುವಂತೆ ಅಧಿಕಾರಿಗಳು ಕ್ಲಾಸ್​​

ಮಡಿಕೇರಿ :ಮೈಸೂರಿನಿಂದ ಕೊಡಗಿಗೆ ಬಂದು ಕ್ವಾರಂಟೈನ್ ಅವಧಿ ಪಾಲಿಸದಿದ್ದ ವ್ಯಕ್ತಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತೆ ಕ್ವಾರಂಟೈನ್​​​​ಗೆ ದಾಖಲಿಸಿರುವ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ.

ಮೈಸೂರಿನ ಕೆ.ಆರ್.ನಗರದಿಂದ 3 ನೇ ತಾರೀಖಿನಂದು ಬಂದಿದ್ದ ವ್ಯಕ್ತಿ ಬಳಿಕ 4 ನೇ ತಾರೀಖಿನಿಂದ ಮಡಿಕೇರಿಯ ಓಂಕಾರೇಶ್ವರ ದೇವಾಲಯದ ರಸ್ತೆಯಲ್ಲಿ‌ ಟೈಲರಿಂಗ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದರು. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಶಾಪ್‌ಗೆ ಆಗಮಿಸಿದ ಅಧಿಕಾರಿಗಳು 14 ದಿನಗಳು ಕ್ವಾರಂಟೈನ್‌ನಲ್ಲೇ ಇರುವಂತೆ ಸೂಚಿಸಿದ್ದಾರೆ.

ಕೊವೀಡ್-19 ಪರಿಣಾಮ ಲಾಕ್‌ಡೌನ್ ಪಾಲಿಸುವಂತೆ ಎಷ್ಟೇ ಅರಿವು ಮೂಡಿಸುತ್ತಿದ್ದರೂ ಜನರು ಮಾತ್ರ ನಿಮಯಗಳನ್ನು ಗಾಳಿಗೆ ತೂರುತ್ತಿದ್ದಾರೆ. ಕ್ವಾರಂಟೈನ್ ಇರಬೇಕಾದವರು ಎಲ್ಲೆಂದರಲ್ಲಿ ಓಡಾಡುತ್ತಿರುವುದರಿಂದ ಸ್ಥಳೀಯರೂ ಆತಂಕದಿಂದ ಕಾಲ ಕಳೆಯುತ್ತಿದ್ದಾರೆ.

ABOUT THE AUTHOR

...view details