ಕರ್ನಾಟಕ

karnataka

ETV Bharat / state

ಕಲಬುರಗಿ: ಯುವಕನಿಗೆ ಚಾಕುವಿನಿಂದ ಇರಿದು ದರೋಡೆ - ಯುವಕನ ದರೋಡೆ

ನಡೆದುಕೊಂಡು ಹೊರಟಿದ್ದ ಯುವಕನನ್ನು ಅಡ್ಡಗಟ್ಟಿ ಚಾಕುವಿನಿಂದ ಇರಿದು ದರೋಡೆ ನಡೆಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

young-man-robbed-in-kalaburagi
ದರೋಡೆ

By

Published : Aug 27, 2020, 2:38 AM IST

ಕಲಬುರಗಿ:ನಡೆದುಕೊಂಡು ಹೊರಟಿದ್ದ ಯುವಕನನ್ನು ಅಡ್ಡಗಟ್ಟಿ ಚಾಕುವಿನಿಂದ ಇರಿದು ಹಣ, ಮೊಬೈಲ್ ಕಸಿದುಕೊಂಡು ಹೋಗಿರುವ ಘಟನೆ ಇಲ್ಲಿನ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತಾಜನಗರದಲ್ಲಿ ವಾಸಿಸುತ್ತಿರುವ ಸಂದೀಪ್​ ಕುಮಾರ್​ ಜನಿಹರ್ (20) ದುಷ್ಕರ್ಮಿಗಳಿಂದ ಗಾಯಗೊಂಡಿರುವ ಯುವಕ. ಉತ್ತರ ಪ್ರದೇಶದ ಲಖಿಪುರ ಮೂಲದ ಸಂದೀಪ್​ ಕುಮಾರ್​, ಸಿಮೆಂಟ್ ಹೂಕುಂಡಗಳನ್ನು ತಯಾರಿಸುವ ಕೆಲಸ ಮಾಡುತ್ತಿದ್ದ. ಸಾಯಂಕಾಲ ನಡೆದುಕೊಂಡು ಹೋಗುವಾಗ ಬೈಕ್​ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹಣ, ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾರೆ.

ಯುವಕನಿಗೆ ಚಾಕುವಿನಿಂದ ಇರಿದು ದರೋಡೆ

ತೀವ್ರ ಸ್ವರೂಪದ ಗಾಯಗಳಾಗಿ ನರಳಾಡುತ್ತಿದ್ದ ಸಂದೀಪನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮೀಣ ಪೊಲೀಸ್​​ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಇತ್ತೀಚೆಗೆ ಜಿಲ್ಲೆಯಲ್ಲಿ ನಿರ್ಭಯವಾಗಿ ದುಷ್ಕರ್ಮಿಗಳು ಕೊಲೆ, ಸುಲಿಗೆ, ಮನೆಗಳ್ಳತನ ಮಾಡುತ್ತಿದ್ದು, ನಗರದ ನಿವಾಸಿಗಳು ಆತಂಕದಲ್ಲಿದ್ದಾರೆ. ಪೊಲೀಸರು ತಕ್ಷಣ ಆರೋಪಿಗಳನ್ನು ಬಂಧಿಸಿ ದುಷ್ಕೃತ್ಯಗಳಿಗೆ ಕಡಿವಾಣ ಹಾಕುವಂತೆ ನಗರದ ಜನತೆ ಆಗ್ರಹಿಸಿದ್ದಾರೆ.

ABOUT THE AUTHOR

...view details