ಕಲಬುರಗಿ:ಕುಡಿದ ಮತ್ತಿನಲ್ಲಿ ಮಾರಕಾಸ್ತ್ರದಿಂದ ಕುತ್ತಿಗೆ ಸೀಳಿ ಪತಿಯೇ ಪತ್ನಿಯ ಬರ್ಬರ ಹತ್ಯೆಗೈದ ಘಟನೆ ಬ್ರಹ್ಮಪೂರ ಶಾ-ಹುಸೇನ್ ಚಿಲ್ಲಾ ದರ್ಗಾ ಬಳಿ ನಡೆದಿದೆ.
ಚಂದಾಬಾಯಿ (27) ಎಂಬುವಳೇ ಪತಿಯಿಂದ ಹತ್ಯೆಗೀಡಾದ ಪತ್ನಿ. ಈಕೆಯ ಪತಿ ಜಗದೀಶ್ ಹತ್ಯೆಗೈದ ಆರೋಪಿ ಎಂದು ತಿಳಿದುಬಂದಿದೆ. ಮೂರು ವರ್ಷಗಳ ಹಿಂದೆ ಚಂದಾಬಾಯಿ ಮತ್ತು ಜಗದೀಶ ಮದುವೆಯಾಗಿದ್ದು, ಶಾ ಹುಸೇನ್ ಚಿಲ್ಲಾ ದರ್ಗಾ ಬಳಿ ರೂಂ ಬಾಡಿಗೆ ಪಡೆದು ವಾಸವಾಗಿದ್ದರು. ಕುಡಿತದ ಚಟವಿದ್ದ ಜಗದೀಶ್ ನಿತ್ಯ ಮದ್ಯದ ಮತ್ತಿನಲ್ಲಿ ಪತ್ನಿಗೆ ಕಿರುಕುಳ ನೀಡುತ್ತಿದ್ದನಂತೆ.