ಕರ್ನಾಟಕ

karnataka

ETV Bharat / state

ಕೇಂದ್ರ ಬಜೆಟ್​ನಲ್ಲಿ ಹೈದರಾಬಾದ್​ ಕರ್ನಾಟಕಕ್ಕೆ ಸಿಗುತ್ತಾ ಆದ್ಯತೆ...? - undefined

ಬರಗಾಲದ ಹಿನ್ನಲೆ ಕೃಷಿಕರಿಗೆ ಸಂಕಷ್ಟ ಎದುರಾಗಿದೆ. ರೈತರ ಸಂಕಷ್ಟ ನೀಗಿಸಲು ಸಂಪೂರ್ಣ ಸಾಲ ಮನ್ನಾ, ಕೃಷಿಗೆ ಸಾಲ ಸೌಲಭ್ಯ, ರೈತರ ಆದಾಯ ಹೆಚ್ಚಿಸುವ ಜೊತೆಗೆ ಸ್ವಾಮಿನಾಥನ್​​ ವರದಿ ಅನುಸಾರ ಸೌಲಭ್ಯ, ಲಘು ನೀರಾವರಿಗೆ ಹೆಚ್ಚಿನ ಆದ್ಯತೆ ಸಿಗಬಹುದೆಂಬ ನೀರಿಕ್ಷೆಯೂ ಇಲ್ಲಿನ ಜನರಲ್ಲಿದೆ.

ಮಾರುತಿ ಮಾನ್ಪಡೆ, ಬಸವರಾಜ್ ಇಂಗಿನ್

By

Published : Jul 5, 2019, 4:48 AM IST

ಕಲಬುರಗಿ:ಪ್ರಧಾನಿ ಮೋದಿ ನೇತೃತ್ವದ ಎರಡನೇ ಅವಧಿಯ ಕೇಂದ್ರ ಸರ್ಕಾರ ನಾಳೆ ಪ್ರಥಮ ಬಜೆಟ್ ಮಂಡಿಸಲಿದ್ದು, ಬಜೆಟ್​ ಮಂಡಿಸಲಿರುವ ಕರ್ನಾಟಕದ ಪ್ರತಿನಿಧಿಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸಿತಾರಾಮನ್ ಅವರು ಕರ್ನಾಟಕಕ್ಕೆ ಹೆಚ್ಚು ಆದ್ಯತೆ ನೀಡಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ.

ಬಜೆಟ್​ ಕುರಿತು ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಮತ್ತು ರೈತ ಮುಖಂಡ ಬಸವರಾಜ್ ಇಂಗಿನ್.

ಲೋಕಸಭೆ ಚುನಾವಣೆಗೂ ಮುನ್ನ ಇದೇ ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್​ ಮಂಡಿಸಿತ್ತು. ಕಳೆದ ಬಜೆಟ್​ನಲ್ಲಿ ಹೈದರಾಬಾದ್​ ಕರ್ನಾಟಕ ಭಾಗಕ್ಕೆ ಹೇಳಿಕೊಳ್ಳುವ ಆದ್ಯತೆ ಸಿಗಲಿಲ್ಲ ಎಂಬ ಅಸಮದಾನ ಈ ಭಾಗದ ಜನರಲ್ಲಿತ್ತು. ನಾಳಿನ ಬಜೆಟ್​​ನಲ್ಲಾದರೂ ಹೈ-ಕಗೆ ಹೆಚ್ಚಿನ ಆದ್ಯತೆ ಸಿಗಬಹುದು ಎಂಬ ನೀರಿಕ್ಷೆ ಇಲ್ಲಿನ ಜನರದಾಗಿದೆ.

For All Latest Updates

TAGGED:

ABOUT THE AUTHOR

...view details