ಕರ್ನಾಟಕ

karnataka

ETV Bharat / state

ಗ್ರಾಮವನ್ನು ಹೋಬಳಿ ಕೇಂದ್ರ ಮಾಡುವಂತೆ ರಕ್ತದಲ್ಲಿ ಪತ್ರ ಬರೆದು ಹೋರಾಟ - ಗ್ರಾಮವನ್ನು ಹೋಬಳಿ ಕೇಂದ್ರ ಮಾಡುವಂತೆ ರಕ್ತದಲ್ಲಿ ಪತ್ರಬರೆದು ಹೋರಾಟ..

ರಟಕಲ್​ ಗ್ರಾಮವನ್ನು ಹೋಬಳಿ ಕೇಂದ್ರವಾಗಿ ಮಾಡುವಂತೆ ಗ್ರಾಮಸ್ಥರು ರಾಜ್ಯಪಾಲರು, ಸಿಎಂ, ಕಂದಾಯ ಸಚಿವರು ಮತ್ತು ವಿಧಾನಸಭಾ ಸ್ಪೀಕರ್​ಗೆ ರಕ್ತದಲ್ಲಿ ಮನವಿ ಪತ್ರ ಬರೆದು ವಿನಂತಿಸಿದ್ಧಾರೆ.

Writing a letter in blood and protesting
ಗ್ರಾಮವನ್ನು ಹೋಬಳಿ ಕೇಂದ್ರ ಮಾಡುವಂತೆ ರಕ್ತದಲ್ಲಿ ಪತ್ರಬರೆದು ಹೋರಾಟ..

By

Published : Mar 7, 2022, 8:01 PM IST

ಕಲಬುರಗಿ:ಜಿಲ್ಲೆಯ ರಟಕಲ್ ಗ್ರಾಮವನ್ನು ರೆವಿನ್ಯೂ ಹೋಬಳಿ ಕೇಂದ್ರವಾಗಿಸುವಂತೆ ಆಗ್ರಹಿಸಿ ಗ್ರಾಮಸ್ಥರು ವಿನೂತನವಾಗಿ ಪ್ರತಿಭಟಿಸುವ ಮೂಲಕ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ರಟಕಲ್ ಗ್ರಾಮವನ್ನು ಹೋಬಳಿ ಮಾಡುವಂತೆ ರಟಕಲ್ ಹೋಬಳಿ ಹೋರಾಟ ಸಮಿತಿಯ ನೇತೃತ್ವದಲ್ಲಿ ರಕ್ತದಿಂದ ಪತ್ರ ಅಭಿಯಾನ ಕೈಗೊಳ್ಳಲಾಗಿದೆ‌‌. ಈ ಕುರಿತು ಹಲವು ದಿನಗಳಿಂದ ಹೋರಾಟ ನಡೆಸಲಾಗುತ್ತಿದ್ದು, ಸರ್ಕಾರ ಗ್ರಾಮಸ್ಥರ ಹೋರಾಟಕ್ಕೆ ಕಿವಿಗೊಡದ ಕಾರಣಕ್ಕೆ ಗ್ರಾಮದ ಜನ ವಿನೂತನ ಪ್ರತಿಭಟನೆಗೆ ಮುಂದಾಗಿದ್ದಾರೆ.

ತಾಲೂಕು ಕೇಂದ್ರದಿಂದ 15 ಕಿ.ಲೋ ಮೀಟರ್ ದೂರದಲ್ಲಿರುವ ರಟಕಲ್ ಗ್ರಾಮದಲ್ಲಿ ಪೊಲೀಸ್ ಠಾಣೆ, ವಿದ್ಯುತ್ ಘಟಕ, ಅಂಚೆ ಕಚೇರಿ, ಸರಕಾರಿ ಶಾಲೆಗಳು ಸೇರಿದಂತೆ ಅನೇಕ ಕಚೇರಿಗಳಿವೆ. ಇನ್ನೂ ಅನೇಕ ಕಚೇರಿಗಳನ್ನು ತೆರೆಯಲು ಸರ್ಕಾರಿ ಜಮೀನು ಕೂಡಾ ಇದೆ. ಆದರೂ ಹೋಬಳಿ‌ ಕೇಂದ್ರವಾಗಿಸಲು ಸರ್ಕಾರ ಸಕಾರಾತ್ಮಕ ಕ್ರಮ ಕೈಗೊಳ್ಳುತ್ತಿಲ್ಲ ಅಂತ ರಟಕಲ್ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಟಕಲ್ ಗ್ರಾಮವನ್ನು ರೆವಿನ್ಯೂ ಹೋಬಳಿ ಮಾಡುವಂತೆ ಈ ಹಿಂದೆ ಅನೇಕ ಬಾರಿ ಹೋರಾಟ ಮಾಡಲಾಗಿತ್ತು. ಗ್ರಾಮದಿಂದ 55 ಕಿ.ಮೀ ದೂರದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ಪಾದಯಾತ್ರೆ ಕೂಡ ಹಮ್ಮಿಕೊಂಡು ಮನವಿ ಸಲ್ಲಿಸಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿಲ್ಲ.

ಹೀಗಾಗಿ ಮನವಿಗೆ ಕಿವಿಗೊಡುವಂತೆ ರಾಜ್ಯಪಾಲರು, ಸಿಎಂ, ಕಂದಾಯ ಮಂತ್ರಿ, ವಿಧಾನಸಭೆ ಸ್ಪೀಕರ್​ಗೆ ಸೇರಿದಂತೆ ಅನೇಕರಿಗೆ ರಕ್ತದಿಂದ ಮನವಿಪತ್ರ ಬರೆಯುವ ಮೂಲಕ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ.

ಇದನ್ನೂ ಓದಿ:ರಾಯಚೂರು: ಸಿವಿಲ್‌ ಇಂಜಿನಿಯರಿಂಗ್‌ನಲ್ಲಿ 16 ಚಿನ್ನದ ಪದಕ ಪಡೆದ ಬುಶ್ರಾ ಮತೀನ್‌

For All Latest Updates

TAGGED:

ABOUT THE AUTHOR

...view details