ಕರ್ನಾಟಕ

karnataka

ETV Bharat / state

ಕಲಬುರಗಿಯ ದಾಲ್ ಮಿಲ್ ಅಸೋಸಿಯೇಷನ್ ವತಿಯಿಂದ ನೆರೆಸಂತ್ರಸ್ಥರಿಗೆ ಬೆಂಬಲ - ತೊಗರಿ ಬೇಳೆ ವಿತರಣೆ

ಕಲಬುರಗಿಯ ಬೇಳೆ ಕಾಳು ಉತ್ಪಾದಕರ ಸಂಘ ಪ್ರವಾಹ ಪೀಡಿತರ ನೋವಿಗೆ ಸ್ಪಂದಿಸಿದೆ. ಕಲಬುರಗಿಯ ದಾಲ್ ಮಿಲ್ ಅಸೋಸಿಯೇಷನ್ ವತಿಯಿಂದ 103 ಕ್ವಿಂಟಲ್ ತೊಗರಿ ಬೇಳೆಯನ್ನು ನೆರೆಪೀಡಿತ ಪ್ರದೇಶಗಳಿಗೆ ರವಾನಿಸಲಾಗಿದೆ.

ನೆರೆಸಂತ್ರಸ್ಥರಿಗೆ ಬೆಂಬಲ

By

Published : Aug 26, 2019, 8:39 PM IST

ಕಲಬುರಗಿ: ನೆರೆ ಪೀಡಿತ ಜನರಿಗೆ ಕಲಬುರಗಿಯ ದಾಲ್ ಮಿಲ್ ಅಸೋಸಿಯೇಷನ್ ವತಿಯಿಂದ 103 ಕ್ವಿಂಟಲ್ ತೊಗರಿ ಬೇಳೆಯನ್ನು ನೆರೆಪೀಡಿತ ಪ್ರದೇಶಗಳಿಗೆ ರವಾನಿಸಲಾಗಿದೆ.

ರಾಜ್ಯದಲ್ಲಿ ಉಂಟಾದ ನೆರೆ ಎಲ್ಲರನ್ನೂ ಸಂಕಷ್ಟಕ್ಕೆ ದೂಡಿದೆ. ಇಂತಹ ಪರಿಸ್ಥಿತಿಯಲ್ಲಿ ಕಲಬುರಗಿಯ ಬೇಳೆ ಕಾಳು ಉತ್ಪಾದಕರ ಸಂಘ ಪ್ರವಾಹ ಪೀಡಿತರ ನೋವಿಗೆ ಸ್ಪಂದಿಸಿದೆ. ಸದ್ಯದ ಮಟ್ಟಿಗೆ ದುಬಾರಿ ವಸ್ತುಗಳಲ್ಲಿ ತೊಗರಿ ಬೇಳೆಯೂ ಒಂದು ಎಂಬಂತಾಗಿದೆ. ಇಂತಹ ಸಂದರ್ಭದಲ್ಲಿಯೂ ಸಹ ದಾಲ್ ಮಿಲ್ ಮಾಲೀಕರಿಂದ ತೊಗರಿ ಬೇಳೆ ಸಂಗ್ರಹಿಸಿ ದೇಣಿಗೆಯಾಗಿ ನೀಡಲಾಗುತ್ತಿದೆ. 7.50 ಲಕ್ಷ ರೂಪಾಯಿ ಮೌಲ್ಯದ 103 ಕ್ವಿಂಟಲ್ 25 ಕೆ.ಜೆ. ತೊಗರಿ ಬೇಳೆಯನ್ನು ನೆರೆಪೀಡಿತ ಪ್ರದೇಶಗಳಿಗೆ ಕಳುಹಿಸಿಕೊಡಲಾಯಿತು.

ಕಲಬುರಗಿಯ ದಾಲ್ ಮಿಲ್ ಅಸೋಸಿಯೇಷನ್ ವತಿಯಿಂದ ನೆರೆಸಂತ್ರಸ್ಥರಿಗೆ ಬೆಂಬಲ

ದಾಲ್ ಮಿಲ್ ಗಳೂ ಸಹ ಸಾಕಷ್ಟು ಸಮಸ್ಯೆ ಎದುರಿಸುತ್ತಿವೆ. ಆದರೆ ನೆರೆ ಸಂತ್ರಸ್ಥರ ಸಮಸ್ಯೆ ಮುಂದೆ ನಮ್ಮದು ದೊಡ್ಡ ಸಮಸ್ಯೆಯಲ್ಲ. ಅವರ ನೋವಿಗೆ ಸ್ಪಂದಿಸಬೇಕೆಂಬ ನಿಟ್ಟಿನಲ್ಲಿ ತೊಗರಿ ಬೇಳೆ ಸಂಗ್ರಹಿಸಿ ರವಾನಿಸುತ್ತಿರುವುದಾಗಿ ದಾಲ್ ಮಿಲ್ ಅಸೋಸಿಯೇಷನ್ ಮುಖಂಡರು ತಿಳಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ನೆರೆ ಸಂತ್ರಸ್ಥರಿಗೆ ತೊಗರಿ ಬೇಳೆ ವಿತರಣೆ ಮಾಡಲು ನಿರ್ಧರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಗ್ರಹಿಸಿ ನೆರವಾಗಲು ದಾಲ್ ಮಿಲ್ ಅಸೋಸಿಯೇಷನ್ ಮುಂದಾಗಿದೆಯೆಂದು ದಾಲ್ ಮಿಲ್ ಅಸೋಸಿಯೇಷನ್ ಅಧ್ಯಕ್ಷ ಶಿವಶರಣಪ್ಪ ನಿಗ್ಗುಡಗಿ ಹೇಳಿದರು.

ABOUT THE AUTHOR

...view details