ಕರ್ನಾಟಕ

karnataka

By

Published : Dec 23, 2019, 7:09 AM IST

ETV Bharat / state

ಅಫ್ಜಲ್​ಪುರ ಬಳಿ ವಿದ್ಯಾರ್ಥಿ ಮೇಲೆ ಹರಿದ ಟ್ರ್ಯಾಕ್ಟರ್: ಬಾಲಕ ಸ್ಥಳದಲ್ಲೇ ಸಾವು

ವಿದ್ಯಾರ್ಥಿ ಮೇಲೆ ಕಬ್ಬಿನ ಟ್ರ್ಯಾಕ್ಟರ್ ಹರಿದ ಪರಿಣಾಮ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.

Road accident
Road accident

ಕಲಬುರಗಿ: ವಿದ್ಯಾರ್ಥಿ ಮೇಲೆ ಕಬ್ಬಿನ ಟ್ರ್ಯಾಕ್ಟರ್ ಹರಿದ ಪರಿಣಾಮ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಅಫ್ಜಲ್​ಪುರ ತಾಲೂಕಿನ ಚಿಣಮಗೇರಾ ಬಳಿ ನಡೆದಿದೆ.

ಗಂಗಾಧರ ಕೇಮಲಿಂಗ (14) ಮೃತ ವಿದ್ಯಾರ್ಥಿ. ಗಂಗಾಧರ ಕಲಬುರಗಿ ತಾಲೂಕಿನ ಉಪಳಾಂವ್ ಗ್ರಾಮದವನು. ಚಿಣಮಗೇರ ವಸತಿ ನಿಲಯದಲ್ಲಿದ್ದುಕೊಂಡು ಶಾಲೆಗೆ ಹೋಗುತ್ತಿದ್ದ ಎಂದು ತಿಳಿದುಬಂದಿದೆ.

ಇನ್ನು, ಘಟನೆ ನಡೆಯುತ್ತಿದ್ದಂತೆ ಟ್ರ್ಯಾಕ್ಟರ್ ಚಾಲಕ ಪರಾರಿಯಾಗಿದ್ದು, ಗಾಣಗಾಪುರ ಪೊಲೀಸರು ಪ್ರಕರಣ ದಾಖಲಿಕೊಂಡು ತನಿಖೆ ಆರಂಭಿಸಿದ್ದಾರೆ.

ABOUT THE AUTHOR

...view details