ಕರ್ನಾಟಕ

karnataka

ETV Bharat / state

'ರೈತರ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿ ಇಲ್ಲ' - ಕೃಷಿ ತಜ್ಞ ಅಖಿಲ ಭಾರತ ಕಿಸಾನ ಸಭಾದ ರಾಷ್ಟ್ರೀಯ ಉಪಾಧ್ಯಕ್ಷ ವಿಜು ಕೃಷ್ಣನ್ ಕಲಬುರಗಿ

ಕಲಬುರಗಿಯಲ್ಲಿ ರಾಜ್ಯ ಮಟ್ಟದ ತೊಗರಿ, ಹೆಸರು, ಉದ್ದು, ಕಡ್ಲೆ ಬೆಳೆಗಾರರ ಸಮಾವೇಶ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕೃಷಿ ತಜ್ಞ ಅಖಿಲ ಭಾರತ ಕಿಸಾನ ಸಭಾದ ರಾಷ್ಟ್ರೀಯ ಉಪಾಧ್ಯಕ್ಷ ವಿಜು ಕೃಷ್ಣನ್ ಕಿಡಿ.

kalburagi
ರಾಜ್ಯ ಮಟ್ಟದ ತೊಗರಿ, ಹೆಸರು, ಉದ್ದು, ಕಡ್ಲೆ ಬೆಳೆಗಾರರ ಸಮಾವೇಶ

By

Published : Dec 12, 2019, 9:33 PM IST

ಕಲಬುರಗಿ:ಪೌಷ್ಠಿಕ ಆಹಾರ ಬೇಳೆ ಕಾಳು ಬೆಳೆಯುವ ರೈತರ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸ್ವಲ್ಪವು ಕಾಳಜಿ ಇಲ್ಲ ಎಂದು ಕೃಷಿ ತಜ್ಞ ಅಖಿಲ ಭಾರತ ಕಿಸಾನ ಸಭಾದ ರಾಷ್ಟ್ರೀಯ ಉಪಾಧ್ಯಕ್ಷ ವಿಜು ಕೃಷ್ಣನ್ ಆರೋಪಿಸಿದರು.

ರಾಜ್ಯ ಮಟ್ಟದ ತೊಗರಿ, ಹೆಸರು, ಉದ್ದು, ಕಡ್ಲೆ ಬೆಳೆಗಾರರ ಸಮಾವೇಶ

ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ನಗರದ ಎಸ್.ಎಮ್. ಪಂಡಿತ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ತೊಗರಿ, ಹೆಸರು, ಉದ್ದು, ಕಡ್ಲೆ ಬೆಳೆಗಾರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಆಂಧ್ರಪ್ರದೇಶ ಹೀಗೆ ಹಲವು ರಾಜ್ಯಗಳಲ್ಲಿ ಪೌಷ್ಠಿಕ ಆಹಾರ ಒದಗಿಸುವ ತೊಗರಿ, ಹೆಸರು, ಉದ್ದು, ಕಡ್ಲೆಬೇಳೆ ಕಾಳು ಬೆಳೆಗಾರರು ತೊಂದರೆಯಲ್ಲಿದ್ದರೂ ಸಹ ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಬಗ್ಗೆ ತೆಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ದೂರಿದರು.

ಇನ್ನು ಸಮಾವೇಶದಲ್ಲಿ ಕೂಡಲೇ ರೈತರ ಹಾಗೂ ಬೇಳೆಕಾಳು ಬೆಳೆಗಾರರ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸುವಂತೆ ಹಾಗೂ ಡಾ.ಎಂ.ಎಸ್. ಸ್ವಾಮಿನಾಥನ್ ವರದಿ‌ ಜಾರಿಗೊಳಿಸುವಂತೆ ಆಗ್ರಹಿಸಿದರು. ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಾಡೆ, ಯು ಬಸವರಾಜ್, ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮ್ಮಶೆಟ್ಟಿ ಮತ್ತಿತರು ಸಮಾವೇಶದಲ್ಲಿ ಉಪಸ್ಥಿತರಿದ್ದರು.

For All Latest Updates

TAGGED:

ABOUT THE AUTHOR

...view details