ಸೇಡಂ(ಕಲಬುರಗಿ): ಕೊರೊನಾ ಭೀತಿಯ ಬೆನ್ನಲ್ಲೇ ಅಧಿಕಾರಿಗಳು ಸಮಸ್ಯೆಗಳನ್ನ ಎದುರಿಸುವುದು ಸಾಮಾನ್ಯವಾಗಿದ್ದು, ಗ್ರಾಮೀಣ ಭಾಗದಲ್ಲಿ ಸಾಮಾಜಿಕ ಅಂತರಕ್ಕೆ ಆದ್ಯತೆ ನೀಡಲಾಗುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿವೆ.
ಗ್ರಾಮೀಣ ಭಾಗದಲ್ಲಿಲ್ಲ ಸಾಮಾಜಿಕ ಅಂತರ : ಜನರ ಗುಂಪು ಕಂಡು ಅಧಿಕಾರಿಗಳು ಹೈರಾಣು - Response to Lockdown
ದೆಹಲಿ, ಮುಂಬೈ, ಹೈದರಾಬಾದ್, ಪೂಣೆ, ಗುಜರಾತಗಳಿಂದ ವಾಪಸ್ ಆದ ಸಾವಿರಾರು ಜನರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಹೀಗೆ ಬಂದವರಲ್ಲಿ ಬಹುತೇಕರು ಗ್ರಾಮೀಣ ಭಾಗದವರೇ ಆಗಿದ್ದು, ಜನತೆಯಲ್ಲಿ ಆತಂಕ ಮತ್ತಷ್ಟು ಹೆಚ್ಚಿಸಿದೆ.

ಗ್ರಾಮೀಣ ಭಾಗದಲ್ಲಿಲ್ಲ ಸಾಮಾಜಿಕ ಅಂತರ : ಗುಂಪು ಜನರನ್ನು ಕಂಡು ಅಧಿಕಾರಿಗಳು ಹೈರಾಣು
ತಾಲೂಕಿನ ಬಟಗೇರಾ, ರಂಜೋಳ, ಮುಧೋಳ, ಮಳಖೇಡ, ಕೋಡ್ಲಾ, ಆಡಕಿ ಸೇರಿದಂತೆ ಅನೇಕ ಕಡೆಗಳಲ್ಲಿ ಲಾಕಡೌನ್ ಗೆ ಜನ ಕ್ಯಾರೆ ಎನ್ನುತ್ತಿಲ್ಲ. ಅಂಗಡಿ ಮುಂಗಟ್ಟುಗಳು ದಿನ ಪೂರ್ತಿ ತೆರೆದಿಡಲಾಗುತ್ತಿದೆ. ಜನ ಮನೆಯಲ್ಲಿರದೇ ರಸ್ತೆಗಳ ಮೇಲೆ ತಿರುಗಾಡುತ್ತಿದ್ದಾರೆ. ಬ್ಯಾಂಕ್ ಗಳ ಎದುರು ತಂಡೋಪತಂಡವಾಗಿ ಜನ ಬರುತ್ತಿರುವ ದೃಶ್ಯಗಳು ಕೂಡ ಕಾಣ ಸಿಗುತ್ತಿವೆ.
ಇನ್ನೂ ಹೊರರಾಜ್ಯಗಳಿಂದ ವಾಪಸ್ ಆದ ಸಾವಿರಾರು ಜನರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಆದರೆ, ಹೀಗೆ ಬಂದವರಲ್ಲಿ ಬಹುತೇಕರು ಗ್ರಾಮೀಣ ಭಾಗದವರೇ ಆಗಿದ್ದು, ಜನತೆಯಲ್ಲಿ ಆತಂಕ ಮತ್ತಷ್ಟು ಹೆಚ್ಚಿಸಿದೆ.