ಕರ್ನಾಟಕ

karnataka

By

Published : Sep 29, 2020, 7:57 PM IST

ETV Bharat / state

ಅಕಾಲಿಕ ಮರಣ ಹೊಂದಿದ ಮುಖಂಡನ ಮನೆಗೆ  ಶರಣಪ್ರಕಾಶ ಪಾಟೀಲ್​ ಭೇಟಿ: ಸಾಂತ್ವನ

ಕಳೆದ ಸೆ. 24 ರಂದು ತಾಲೂಕಿನ ಮಳಖೇಡ ಸ್ಟೇಷನ್​ ತಾಂಡಾದ ಭದ್ದು ಚವ್ಹಾಣ್​ ಹೈದರಾಬಾದ್​ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಅವರ ನಿವಾಸಕ್ಕೆ ಮಾಜಿ ಶರಣಪ್ರಕಾಶ್​ ಪಾಟೀಲ್​ ಭೇಟಿ ನೀಡಿ ಸಾಂತ್ವನ ಹೇಳಿದರು.

Sharanprakash Patil
ಮಾಜಿ ಸಚಿವ ಶರಣಪ್ರಕಾಶ ಪಾಟೀಲ್

ಸೇಡಂ:ಇತ್ತೀಚೆಗೆ ಅನಾರೋಗ್ಯದಿಂದ ಅಕಾಲಿಕ ಮರಣ ಹೊಂದಿದ ಕಾಂಗ್ರೆಸ್​ ಮುಖಂಡ ಭದ್ದು ಚವ್ಹಾಣ್​ (68) ಅವರ ಮನೆಗೆ ಮಾಜಿ ಸಚಿವ ಡಾ. ಶರಣಪ್ರಕಾಶ್​ ಪಾಟೀಲ್​ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

ಕಳೆದ ಸೆ. 24 ರಂದು ತಾಲೂಕಿನ ಮಳಖೇಡ ಸ್ಟೇಷನ್​ ತಾಂಡಾದ ಭದ್ದು ಚವ್ಹಾಣ್​ ಹೈದರಾಬಾದ್​ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಮೃತನ ನಿವಾಸಕ್ಕೆ ತೆರಳಿದ ಶರಣಪ್ರಕಾಶ್​ ಪಾಟೀಲ್​ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಅವರೊಂದಿಗೆ ಕಾಂಗ್ರೆಸ್​ ಮುಖಂಡ ರಾಜಶೇಖರ್​ ಪುರಾಣಿಕ್​, ರತನಕುಮಾರ, ರವಿಕುಮಾರ ಪವಾರ, ರಮೇಶ ರಾಠೋಡ್​, ಪ್ರತಾಪಸಿಂಗ್​ ಚವ್ಹಾಣ್​, ಲಕ್ಷ್ಮಣ್​ ಚವ್ಹಾಣ, ಪ್ರಕಾಶ ರಾಠೋಡ್​ ಇದ್ದರು.

ABOUT THE AUTHOR

...view details