ಕರ್ನಾಟಕ

karnataka

By

Published : Jun 1, 2021, 8:40 PM IST

ETV Bharat / state

ಉಚಿತ ಫುಡ್ ಶೆಲ್ಟರ್​ಗಳಿಗೆ ಚಾಲನೆ ನೀಡಿದ ಮಾಜಿ ಸಚಿವ ಶರಣಪ್ರಕಾಶ ಪಾಟೀಲ

ಬಡ ಜನರು ಯಾವ ಮಾನಸಿಕ ಅಡೆತಡೆಗಳಿಗೆ ಒಳಗಾಗದೆ ನೇರವಾಗಿ ಬಂದು ಹಸಿವು ನೀಗಿಸಿಕೊಳ್ಳಲು ಫುಡ್ ಶೆಲ್ಟರ್ ಸಹಕಾರಿಯಾಗಲಿದೆ. ಇಂತಹ ಯೋಜನೆ ರೂಪಿಸಿರುವುದು ಸ್ತುತ್ಯಾರ್ಹ..

sharanaprakash-patil-flag-off-to-free-food-shelters-in-sedam
ಉಚಿತ ಫುಡ್ ಶೆಲ್ಟರ್​

ಸೇಡಂ :ತಾಲೂಕು ಮತ್ತು ಮುಧೋಳ ಬ್ಲಾಕ್ ಕಾಂಗ್ರೆಸ್ ಹಾಗೂ ಡಾ. ಶರಣಪ್ರಕಾಶ ಪಾಟೀಲ ಅಭಿಮಾನಿ ಬಳಗದ ವತಿಯಿಂದ ಪಟ್ಟಣದ ಕಲಬುರಗಿ ಕ್ರಾಸ್ ಮತ್ತು ರೈಲು‌ ನಿಲ್ದಾಣದ ಬಳಿಯ ಹನುಮಾನ ದೇವಾಲಯದ ಎದುರು ಉಚಿತ ಊಟದ ಫುಡ್ ಶೆಲ್ಟರ್​ಗಳನ್ನು ಸ್ಥಾಪಿಸಲಾಗಿದೆ.

ಬಡವರಿಗೆ ಊಟ ಬಡಿಸುವ ಮೂಲಕ ಕೆಪಿಸಿಸಿ ವಕ್ತಾರರು ಹಾಗೂ ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಉಚಿತ ಆಹಾರ ಶೆಲ್ಟರ್​​​ಗಳಿಗೆ ಚಾಲನೆ ನೀಡಿದರು.

ಈ ವೇಳೆ ಹಾಲಪ್ಪಯ್ಯ ವಿರಕ್ತ ಮಠದ ಪೂಜ್ಯ ಪಂಚಾಕ್ಷರಿ ಸ್ವಾಮೀಜಿ ಮಾತನಾಡಿ, ಬಡ ಜನರು ಯಾವ ಮಾನಸಿಕ ಅಡೆತಡೆಗಳಿಗೆ ಒಳಗಾಗದೆ ನೇರವಾಗಿ ಬಂದು ಹಸಿವು ನೀಗಿಸಿಕೊಳ್ಳಲು ಫುಡ್ ಶೆಲ್ಟರ್ ಸಹಕಾರಿಯಾಗಲಿದೆ. ಇಂತಹ ಯೋಜನೆ ರೂಪಿಸಿರುವುದು ಸ್ತುತ್ಯಾರ್ಹ ಎಂದರು.

ABOUT THE AUTHOR

...view details