ಕಲಬುರಗಿ: 'ಈಟಿವಿ ಭಾರತ' ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ಅಫಜಲಪುರ ಮತ್ತು ಜೇವರ್ಗಿ ತಾಲೂಕುಗಳಿಗೆ ಸಂಪರ್ಕ ಕಲ್ಪಿಸುವ ಭೀಮಾ ನದಿಗೆ ಅಡ್ಡಲಾದ ಸೇತುವೆ ಸಂಪರ್ಕ ರಸ್ತೆಯ ಮರು ನಿರ್ಮಾಣ ಕಾರ್ಯವನ್ನು ಶುರು ಮಾಡಿದ್ದಾರೆ.
ಚಿನ್ಮಳ್ಳಿ ಬಳಿ ನಿರ್ಮಿಸಿದ ಬ್ರೀಡ್ಜ್ ಕಂ ಬ್ಯಾರೇಜ್ ಸಂಪರ್ಕ ರಸ್ತೆಯನ್ನು ಕಳೆದ ಆರು ತಿಂಗಳ ಹಿಂದಷ್ಟೇ ಕೆಬಿಜೆಎನ್ಎಲ್ ಇಲಾಖೆಯಿಂದ 4.90 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಕೇವಲ 200 ಮೀಟರ್ ದೂರದ ಸಂಪರ್ಕ ರಸ್ತೆಯನ್ನು ಸುಮಾರು ₹5 ಕೋಟಿ ಖರ್ಚು ಮಾಡಿದ್ದರು. ಕಾಮಗಾರಿ ಕಳಪೆಯಾಗಿ ಕೇವಲ 6 ತಿಂಗಳಿಗೆ ಭೀಮಾ ನದಿ ಪ್ರವಾಹದಲ್ಲಿ ಸೇತುವೆ ಸಂಪೂರ್ಣ ಕೊಚ್ಚಿ ಹೋಗಿತ್ತು.