ಕಲಬುರಗಿ:ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಶಹಾಬಾದ ಪಟ್ಟಣದ ಅಪ್ಪರ್ ಮಡ್ಡಿ ಪ್ರದೇಶದಲ್ಲಿ ರೇಷನ್ ಅಂಗಡಿಗಳ ಮುಂದೆ ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಲು ಚೌಕಾಕಾರದ ಬಾಕ್ಸ್ ಹಾಕಲಾಗಿದೆ ಮತ್ತು ಅದರ ನಿಗಾವಣೆಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಸಾಮಾಜಿಕ ಅಂತರ ಕಾಯ್ದುಕೊಂಡು ಪಡಿತರ ಪಡೆದ ಸಾರ್ವಜನಿಕರು - kalaburagi corona news
ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಶಹಾಬಾದ ಪಟ್ಟಣದ ಅಪ್ಪರ್ ಮಡ್ಡಿ ಪ್ರದೇಶದಲ್ಲಿ ರೇಷನ್ ಅಂಗಡಿಗಳ ಮುಂದೆ ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಲು ಚೌಕಾಕಾರದ ಬಾಕ್ಸ್ ಹಾಕಲಾಗಿದೆ ಮತ್ತು ಅದರ ನಿಗಾವಣೆಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
![ಸಾಮಾಜಿಕ ಅಂತರ ಕಾಯ್ದುಕೊಂಡು ಪಡಿತರ ಪಡೆದ ಸಾರ್ವಜನಿಕರು Public received ration while maintaining social distance](https://etvbharatimages.akamaized.net/etvbharat/prod-images/768-512-6678637-156-6678637-1586138461595.jpg)
ಸಾಮಾಜಿಕ ಅಂತರ ಕಾಯ್ದುಕೊಂಡು ಪಡಿತರ ಪಡೆದ ಸಾರ್ವಜನಿಕರು
ಇನ್ನೂ ಸಾರ್ವಜನಿಕರು ಕೂಡ ಚೌಕಾಕಾರದ ಬಾಕ್ಸ್ ನಲ್ಲಿ ನಿಂತು ರೇಷನ್ ಪಡೆದು ನಿಯಮಕ್ಕೆ ಸಹಕರಿಸಿದರು. ಪಟ್ಟಣದಲ್ಲಿ ಇತ್ತೀಚೆಗೆ ಮಹಿಳೆಯೊಬ್ಬಳಿಗೆ ಕೊರೊನಾ ಸೋಂಕು ತಗಲಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಪರಿಪಾಲನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಶಹಾಬಾದ ತಹಶೀಲ್ದಾರ ಸುರೇಶ ವರ್ಮಾ ಸೂಚಿಸಿದ್ದಾರೆ.