ಕರ್ನಾಟಕ

karnataka

ETV Bharat / state

ಕನ್ನಯ್ಯ ಕುಮಾರ್ ಉಪನ್ಯಾಸ ರದ್ದುಗೊಳಿಸಿದ್ದನ್ನು ವಿರೋಧಿಸಿ ಪ್ರತಿಭಟನೆ - protesting against cancellation of Kannaya Kumar lecture ..

ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆಯಬೇಕಿದ್ದ ಯುವ ಮುಖಂಡ ಕನ್ನಯ್ಯ ಕುಮಾರ್ ಉಪನ್ಯಾಸವನ್ನ ರದ್ದುಗೊಳಿಸಿರುವುದನ್ನ ವಿರೋಧಿಸಿ ಇಂದು ಕಲಬುರಗಿಯಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಕನ್ನಯ್ಯ ಕುಮಾರ್ ಉಪನ್ಯಾಸವನ್ನ ರದ್ದುಗೊಳಿಸಿರುವುದನ್ನ ವಿರೋಧಿಸಿ ಪ್ರತಿಭಟನೆ..!

By

Published : Oct 16, 2019, 2:21 PM IST

Updated : Oct 16, 2019, 2:43 PM IST

ಕಲಬುರಗಿ:ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆಯಬೇಕಿದ್ದ ಯುವ ಮುಖಂಡ ಕನ್ನಯ್ಯ ಕುಮಾರ್ ಉಪನ್ಯಾಸವನ್ನ ರದ್ದುಗೊಳಿಸಿರುವುದನ್ನ ವಿರೋಧಿಸಿ ಇಂದು ಕಲಬುರಗಿಯಲ್ಲಿ ವಿವಿಧ ಸಂಘಟನೆಗಳಿಂದ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.

ಕನ್ನಯ್ಯ ಕುಮಾರ್ ಉಪನ್ಯಾಸ ರದ್ದುಗೊಳಿಸಿರುವುದನ್ನ ವಿರೋಧಿಸಿ ಪ್ರತಿಭಟನೆ..!

ವಿವಿ ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ, ರಿಪಬ್ಲಿಕನ್ ಯುಥ್ ಫೆಡರೇಷನ್, ಸಿಪಿಐ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಗರದ ಎಸ್​ವಿಪಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಅಲ್ಲದೆ ರಸ್ತೆ ತಡೆದು ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ವಿಶ್ವವಿದ್ಯಾಲಯ ಕುಲಪತಿ ಅವರು, ಬಿಜೆಪಿ ಹಾಗೂ ಆರ್​ಎಸ್​ಸ್ ಕಪಿಮುಷ್ಠಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜೆಎನ್​ಯು ವಿದ್ಯಾರ್ಥಿ ಮುಖಂಡ ಕನ್ನಯ್ಯ ಕುಮಾರ್​ ಅವರು, ಅಂಬೇಡ್ಕರ್ ಹಾಗೂ ಸಂವಿಧಾನ ಕುರಿತು ಉಪನ್ಯಾಸ ನೀಡಲು ಕಲಬುರಗಿಗೆ ಆಗಮಿಸಿದಾಗ ವಿವಿ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ವಿಸಿ ಅವರು ಅನುಮತಿ‌ ನೀಡಿದ್ದರು.

ಬಳಿಕ ರಾತ್ರೋರಾತ್ರಿ ಅನುಮತಿ ಹಿಂಪಡೆಯುವ ಮೂಲಕ ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ಹಾಗೂ ಆರ್​ಎಸ್​ಎಸ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ವಿವಿ ಹಂಗಾಮಿ ಕುಲಪತಿ ಪರಿಮಳ ಅಂಬೇಕರ್ ಅವರನ್ನು ಅಮಾನತು ಮಾಡಬೇಕು ಹಾಗೂ ಆರ್​ಎಸ್​ಎಸ್​ ಸಂಘಟನೆಯನ್ನು ನಿಷೇಧಿಸಬೇಕೆಂದು ಒತ್ತಾಯಿಸಿದರು.

Last Updated : Oct 16, 2019, 2:43 PM IST

ABOUT THE AUTHOR

...view details