ಕರ್ನಾಟಕ

karnataka

ETV Bharat / state

ಸಿಎಎ ಕುರಿತಾದ ಪ್ರಶ್ನೆಗಳಿಗೆ ಮೋದಿ, ಶಾ ಬಳಿ ಉತ್ತರವಿಲ್ಲ.. ಕುಟುಕಿದ ಸಸಿಕಾಂತ್ ಸೆಂಥಿಲ್ - Former DC Sasikant Senthil statement

ಸಂವಿಧಾನಕ್ಕೆ ವಿರೋಧವಾಗಿ ನಡೆದುಕೊಳ್ಳುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಕಾನೂನು ಹೋರಾಟ ಮಾಡುವುದು ಅಗತ್ಯ. ತಕ್ಷಣ ಸಿಎಎ ಹಿಂಪಡೆಯಬೇಕು. ಈಗಾಗಲೇ ನಾನು ಯಾವುದೇ ದಾಖಲೆ ಕೊಡಲ್ಲ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಸೆರೆವಾಸಕ್ಕೂ ತಯಾರಿದ್ದೇವೆ. ದೇಶದ ಪ್ರತಿ ನಾಗರಿಕನೂ ಈ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವಂತೆ ಸಸಿಕಾಂತ್ ಸೆಂಥೀಲ್ ಕರೆ ನೀಡಿದರು

Former DC Sasikant Senthil press meet
ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥೀಲ್ ಸುದ್ದಿಗೋಷ್ಠಿ

By

Published : Jan 7, 2020, 4:37 PM IST

ಕಲಬುರಗಿ: ಸಿಎಎ, ಎನ್​ಸಿಆರ್ ಮತ್ತು ಎನ್​ಪಿಆರ್ ಕಾಯ್ದೆ ಜಾರಿ ಕುರಿತಾದ ಪ್ರಶ್ನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಬಳಿ ಯಾವುದೇ ಉತ್ತರಗಳಿಲ್ಲ ಎಂದು ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಕುಟುಕಿದ್ದಾರೆ.

ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್..

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸ್ವಾತಂತ್ರ್ಯ ನಂತರ ಸಾಕಷ್ಟು ವಿಷಯಗಳನ್ನು ನೋಡಿದ್ದೇವೆ. ಆದರೀಗ ಪ್ರತಿ ನಾಗರಿಕನಿಗೂ ಪೌರತ್ವ ಸಾಬೀತು ಪಡಿಸುವ ಸಮಸ್ಯೆ ಎದುರಾಗಿದೆ. ಎನ್​ಪಿಆರ್,ಎನ್​ಆರ್​ಸಿಗೂ ಸಂಬಂಧ ಇಲ್ಲ ಎನ್ನುತ್ತಿದ್ದಾರೆ. ಎನ್​ಪಿಆರ್‌ ಮಾಡೋದು ನನ್ನ ಪ್ರಕಾರ ಅವಶ್ಯಕತೆ ಇಲ್ಲ. ಪೌರತ್ವ ಸಾಬೀತು ಮಾಡಿ ಅಂದ್ರೆ ಏನು ಅರ್ಥವಿಲ್ಲ. ಸಿಎಎ,ಎನ್​ಆರ್​ಸಿ, ಎನ್​ಪಿಆರ್ ಇದು ಮುಸ್ಲಿಮರ ಸಮಸ್ಯೆ ಅಷ್ಟೇ ಅಲ್ಲ, ಪ್ರತಿ ನಾಗರಿಕನಿಗೂ ಸಮಸ್ಯೆ. ಈ ಕಾನೂನುಗಳನ್ನು ಯಾವುದೇ ಕಾರಣಕ್ಕೂ ಯಾವುದೇ ಜಾತಿ ಜನಾಂಗಗಳು ಸ್ವಾಗತ ಮಾಡಬಾರದು ಎಂದರು.

ಸಂವಿಧಾನಕ್ಕೆ ವಿರೋಧವಾಗಿ ನಡೆದುಕೊಳ್ಳುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಕಾನೂನು ಹೋರಾಟ ಮಾಡುವುದು ಅಗತ್ಯ. ತಕ್ಷಣ ಸಿಎಎ ಹಿಂಪಡೆಯಬೇಕು. ಈಗಾಗಲೇ ನಾನು ಯಾವುದೇ ದಾಖಲೆ ಕೊಡಲ್ಲ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಸೆರೆವಾಸಕ್ಕೂ ತಯಾರಿದ್ದೇವೆ. ದೇಶದ ಪ್ರತಿ ನಾಗರಿಕನೂ ಈ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವಂತೆ ಸಸಿಕಾಂತ್ ಸೆಂಥೀಲ್ ಕರೆ ನೀಡಿದರು.

ABOUT THE AUTHOR

...view details