ಕರ್ನಾಟಕ

karnataka

ವೇದಿಕೆ ಮೇಲೆ ಕೂರಲು ಸಂಸದ ಉಮೇಶ ಜಾಧವ್​ಗೆ ಕಾಂಗ್ರೆಸ್ ಸದಸ್ಯರಿಂದ ಆಕ್ಷೇಪ... ಬಿಜೆಪಿ ಗರಂ

By

Published : Sep 30, 2019, 5:20 PM IST

ಸಂಸದ ಉಮೇಶ ಜಾಧವ್ ಇಂದು ತೀವ್ರ ಮುಜುಗರ ಅನುಭವಿಸಿದ ಘಟನೆ ನಡೆದಿದೆ. ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ ವೇಳೆ ವೇದಿಕೆ ಮೇಲೆ ಆಸೀನರಾಗಿದ್ದಕ್ಕೆ ಕಾಂಗ್ರೆಸ್ ಸದಸ್ಯರು ಅಕ್ಷೇಪಿಸಿದ ಕಾರಣ ಮುಜುಗರ ಅನುಭವಿಸುವಂತಾಯಿತು.

ಸಂಸದ ಉಮೇಶ ಜಾಧವ್ ಗೆ ಕಾಂಗ್ರೆಸ್ ಸದಸ್ಯರಿಂದ ತೀವ್ರ ಮುಖಭಂಗ

ಕಲಬುರಗಿ:ಸಂಸದ ಉಮೇಶ ಜಾಧವ್ ಇಂದು ತೀವ್ರ ಮುಜುಗರ ಅನುಭವಿಸಿದ ಘಟನೆ ನಡೆದಿದೆ. ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ ವೇಳೆ ವೇದಿಕೆ ಮೇಲೆ ಆಸೀನರಾಗಿದ್ದಕ್ಕೆ ಕಾಂಗ್ರೆಸ್ ಸದಸ್ಯರು ಅಕ್ಷೇಪಿಸಿದ ಕಾರಣ ಮುಜುಗರ ಅನುಭವಿಸುವಂತಾಯಿತು.

ಜಿಲ್ಲಾ ಪಂಚಾಯತ್​​ ಅಧ್ಯಕ್ಷೆ ಸುವರ್ಣ ಮಾಲಾಜಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ ಕರೆಯಲಾಗಿತ್ತು. ಸಭೆಗೆ ಪ್ರಥಮ ಬಾರಿ ಆಗಮಿಸಿದ ಸಂಸದ ಉಮೇಶ್ ಜಾಧವ್ ವೇದಿಕೆ ಮೇಲೆ ಸಿಇಒ ಅವರ ಕುರ್ಚಿಯಲ್ಲಿ ಆಸೀನರಾಗಿದ್ದರು. ಇದು ಜಿಲ್ಲಾ ಪಂಚಾಯಿತಿ ಕಾಂಗ್ರೆಸ್ ಸದಸ್ಯರ ವಿರೋಧಕ್ಕೆ ಕಾರಣವಾಯಿತು. ಸಂಸದರು ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಸಂಸದ ಉಮೇಶ ಜಾಧವ್​​​ಗೆ ಕಾಂಗ್ರೆಸ್ ಸದಸ್ಯರಿಂದ ಮುಜುಗರ
ಪ್ರೋಟೋಕಾಲ್ ಪ್ರಕಾರ ವೇದಿಕೆ ಮೇಲೆ ಸಂಸದರು ಕೂರಬಹುದಾ? ಎಂದು ಸಿಇಒಗೆ ಕಾಂಗ್ರೆಸ್ ಸದಸ್ಯ ಶಿವರುದ್ರಪ್ಪ ಬಿಣಿ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಸದಸ್ಯರ ವಿರೋಧದಿಂದ ಮುಜುಗರಕ್ಕೆ ಒಳಗಾದ ಸಂಸದ ಉಮೇಶ ಜಾಧವ್ ವೇದಿಕೆಯಿಂದ ಕೆಳಗೆ ಇಳಿದರು. ಈ ವೇಳೆ ಸಂಸದರ ಪರವಾಗಿ ಬಿಜೆಪಿ ಸದಸ್ಯರು ಧ್ವನಿ ಎತ್ತಿದಾಗ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ಮಧ್ಯೆ ವಾಗ್ವಾದ ನಡೆಯಿತು. ಕೊನೆಗೆ ಸಂಸದರೇ ಮಧ್ಯಪ್ರವೇಶಿಸಿ ವಾಗ್ವಾದ ಶಮನಗೊಳಿಸಿದರು. ಆದರೆ ಪ್ರಥಮ ಬಾರಿಗೆ ಸಾಮಾನ್ಯ ಸಭೆಗೆ ಬಂದಿದ್ದ ಸಂಸದರಿಗೆ ಅವಮಾನ ಮಾಡಲಾಗಿದೆ ಎಂದು ಬಿಜೆಪಿ ಸದಸ್ಯರು ಆಕ್ರೋಶ ಹೊರಹಾಕಿದರು.

ABOUT THE AUTHOR

...view details