ಕಲಬುರಗಿ: ಅಫಜಲಪುರ ತಾಲೂಕಿನ ಗಾಣಗಾಪುರ ದತ್ತಾತ್ರೇಯ ದೇವಸ್ಥಾನಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಭೇಟಿ ನೀಡಿದರು.
ಗಾಣಗಾಪುರಕ್ಕೆ ಸಚಿವ ಸುಧಾಕರ್ ಭೇಟಿ... ಕೊರೊನಾ ದೂರವಾಗಲೆಂದು ದತ್ತಾತ್ರೇಯನಿಗೆ ವಿಶೇಷ ಪೂಜೆ - Minister Sudhakar visits Dattatreya Temple in Afzalpur
ರಾಜ್ಯ ಪ್ರವಾಸದಲ್ಲಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ಕಲಬುರಗಿ ಜಿಲ್ಲೆ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಿದರು.
![ಗಾಣಗಾಪುರಕ್ಕೆ ಸಚಿವ ಸುಧಾಕರ್ ಭೇಟಿ... ಕೊರೊನಾ ದೂರವಾಗಲೆಂದು ದತ್ತಾತ್ರೇಯನಿಗೆ ವಿಶೇಷ ಪೂಜೆ Minister Sudhakar visits Dattatreya Temple, Ganagapur](https://etvbharatimages.akamaized.net/etvbharat/prod-images/768-512-7609470-679-7609470-1592113419485.jpg)
ಗಾಣಗಾಪುರ ದತ್ತಾತ್ರೇಯ ದೇವಸ್ಥಾನಕ್ಕೆ ಸಚಿವ ಸುಧಾಕರ್ ಭೇಟಿ
ರಾಜ್ಯ ಪ್ರವಾಸದಲ್ಲಿರುವ ಸಚಿವರು ಇಂದು ಬೆಳಗ್ಗೆ ದತ್ತಾತ್ರೇಯನ ಪಾದುಕೆ ದರ್ಶನ ಪಡೆದು, ವಿಶೇಷ ಪೂಜೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ಮಹಾಮಾರಿ ಕೊರೊನಾ ದೂರವಾಗಲೆಂದು ದೇವರಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು.
ಗಾಣಗಾಪುರ ದತ್ತಾತ್ರೇಯ ದೇವಸ್ಥಾನಕ್ಕೆ ಸಚಿವ ಸುಧಾಕರ್ ಭೇಟಿ
ಗ್ರಾಮೀಣ ಶಾಸಕ ಬಸವರಾಜ್ ಮತ್ತಿಮೂಡ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ಸೇರಿದಂತೆ ಮತ್ತಿತರರು ಸಚಿವರಿಗೆ ಸಾಥ್ ನೀಡಿದರು.