ಸೇಡಂ (ಕಲಬುರಗಿ):ಪಟ್ಟಣದ ಸಣ್ಣ ಅಗಸಿ ಹಾಗೂ ರಂಜೋಳ ಗ್ರಾಮದಲ್ಲಿ ಮಧ್ಯರಾತ್ರಿ ಧ್ವಜಾರೋಹಣ ನೆರವೇರಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಸೇಡಂ: ಮಧ್ಯರಾತ್ರಿಯೇ ಧ್ವಜಾರೋಹಣ ನೆರವೇರಿಸಿದ ಪಿಎಸ್ಐ
ಕಲಬುರಗಿಯ ಸೇಡಂ ಪಟ್ಟಣದ ಸಣ್ಣ ಅಗಸಿ ಹಾಗೂ ರಂಜೋಳ ಗ್ರಾಮದಲ್ಲಿ ಮಧ್ಯರಾತ್ರಿಯಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಸ್ವಾತಂತ್ರ್ಯ ದಿನಾಚರಣೆ
ಸಣ್ಣ ಅಗಸಿ ಬಡಾವಣೆಯಲ್ಲಿ ಪ್ರತಿವರ್ಷವೂ ಮಧ್ಯರಾತ್ರಿ ಧ್ವಜಾರೋಹಣ ಮಾಡುವ ಪದ್ಧತಿಯಿದೆ. ಹಾಗಾಗಿ, ಶುಕ್ರವಾರ ರಾತ್ರಿಯೇ ಪಿಎಸ್ಐ ಸುಶೀಲ್ ಕುಮಾರ್ ಅವರು ಧ್ವಜಾರೋಹಣ ನೆರವೇರಿಸಿದ್ದಾರೆ.
ಈ ವೇಳೆ ಹಿರಿಯ ಸಾಹಿತಿ, ಪತ್ರಕರ್ತ ಮಹಿಪಾಲ ರೆಡ್ಡಿ ಮುನ್ನೂರು ಮಾತನಾಡಿ, ಭಾರತೀಯರು ಸ್ವತಂತ್ರರಾಗಿ ಜೀವಿಸಲು ಅನೇಕ ಹೋರಾಟಗಾರರ ಅವಿರತ ಶ್ರಮ, ತ್ಯಾಗವೇ ಕಾರಣ. ಅಂತಹ ಪವಿತ್ರ ದಿನದಂದು ಮಹನೀಯರನ್ನು ನೆನೆಯುವ ಅವಶ್ಯಕತೆ ಇದೆ ಎಂದು ಹೇಳಿದರು.
Last Updated : Aug 15, 2020, 7:09 PM IST