ಕರ್ನಾಟಕ

karnataka

By

Published : Aug 15, 2020, 5:26 PM IST

Updated : Aug 15, 2020, 7:09 PM IST

ETV Bharat / state

ಸೇಡಂ: ಮಧ್ಯರಾತ್ರಿಯೇ ಧ್ವಜಾರೋಹಣ ನೆರವೇರಿಸಿದ ಪಿಎಸ್ಐ

ಕಲಬುರಗಿಯ ಸೇಡಂ ಪಟ್ಟಣದ ಸಣ್ಣ ಅಗಸಿ ಹಾಗೂ ರಂಜೋಳ ಗ್ರಾಮದಲ್ಲಿ ಮಧ್ಯರಾತ್ರಿಯಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಸ್ವಾತಂತ್ರ್ಯ ದಿನಾಚರಣೆ
ಸ್ವಾತಂತ್ರ್ಯ ದಿನಾಚರಣೆ

ಸೇಡಂ (ಕಲಬುರಗಿ):ಪಟ್ಟಣದ ಸಣ್ಣ ಅಗಸಿ ಹಾಗೂ ರಂಜೋಳ ಗ್ರಾಮದಲ್ಲಿ ಮಧ್ಯರಾತ್ರಿ ಧ್ವಜಾರೋಹಣ ನೆರವೇರಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಸಣ್ಣ ಅಗಸಿ ಬಡಾವಣೆಯಲ್ಲಿ ಪ್ರತಿವರ್ಷವೂ ಮಧ್ಯರಾತ್ರಿ ಧ್ವಜಾರೋಹಣ ಮಾಡುವ ಪದ್ಧತಿಯಿದೆ. ಹಾಗಾಗಿ, ಶುಕ್ರವಾರ ರಾತ್ರಿಯೇ ಪಿಎಸ್ಐ ಸುಶೀಲ್ ಕುಮಾರ್ ಅವರು ಧ್ವಜಾರೋಹಣ ನೆರವೇರಿಸಿದ್ದಾರೆ.

ಈ ವೇಳೆ ಹಿರಿಯ ಸಾಹಿತಿ, ಪತ್ರಕರ್ತ ಮಹಿಪಾಲ ರೆಡ್ಡಿ ಮುನ್ನೂರು ಮಾತನಾಡಿ, ಭಾರತೀಯರು ಸ್ವತಂತ್ರರಾಗಿ ಜೀವಿಸಲು ಅನೇಕ ಹೋರಾಟಗಾರರ ಅವಿರತ ಶ್ರಮ, ತ್ಯಾಗವೇ ಕಾರಣ. ಅಂತಹ ಪವಿತ್ರ ದಿನದಂದು ಮಹನೀಯರನ್ನು ನೆನೆಯುವ ಅವಶ್ಯಕತೆ ಇದೆ ಎಂದು ಹೇಳಿದರು.

Last Updated : Aug 15, 2020, 7:09 PM IST

ABOUT THE AUTHOR

...view details