ಕಲಬುರಗಿ:ಜನವರಿ 21ರಂದು ಎನ್ಆರ್ಸಿ,ಸಿಎಎ, ಎನ್ಪಿಆರ್ ವಿರೋಧಿಸಿ ನಗರದ ಪೀರ್ ಬಂಗಾಲಿ ಮೈದಾನದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ರಾಷ್ಟ್ರಮಟ್ಟದ ನಾಯಕರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪೀಪಲ್ಸ್ ಫೋರಂ ಅಧ್ಯಕ್ಷ ಮಾರುತಿ ಮಾನ್ಪಡೆ ತಿಳಿಸಿದ್ದಾರೆ.
ಸಿಎಎ ವಿರೋಧಿಸಿ ಜ.21ರಂದು ಕಲಬುರಗಿಯಲ್ಲಿ ಬೃಹತ್ ಸಮಾವೇಶ.. - ಕಲಬುರಗಿಯಲ್ಲಿ ಬೃಹತ್ ಸಮಾವೇಶ
ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಸಿಪಿಐಎಂ ಮುಖಂಡ ಸೀತಾರಾಂ ಯಚೋರಿ, ಸಿಪಿಐನ ಅತೂಲ್ ಕುಮಾರ್ ಅಂಜನ್ ಸೇರಿ ಒಟ್ಟು 15 ರಾಷ್ಟೀಯ ಪಕ್ಷಗಳ ನಾಯಕರು ಸಮಾವೇಶದಲ್ಲಿ ಭಾಗವಹಿಸಲ್ಲಿದ್ದಾರೆ.
![ಸಿಎಎ ವಿರೋಧಿಸಿ ಜ.21ರಂದು ಕಲಬುರಗಿಯಲ್ಲಿ ಬೃಹತ್ ಸಮಾವೇಶ.. ಬೃಹತ್ ಸಮಾವೇಶ](https://etvbharatimages.akamaized.net/etvbharat/prod-images/768-512-5767103-thumbnail-3x2-sdfgh.jpg)
ಬೃಹತ್ ಸಮಾವೇಶ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಸಿಪಿಐಎಂ ಮುಖಂಡ ಸೀತಾರಾಂ ಯಚೋರಿ, ಸಿಪಿಐನ ಅತೂಲ್ ಕುಮಾರ್ ಅಂಜನ್ ಸೇರಿ ಒಟ್ಟು 15 ರಾಷ್ಟೀಯ ಪಕ್ಷಗಳ ನಾಯಕರು ಸಮಾವೇಶದಲ್ಲಿ ಭಾಗವಹಿಸಲ್ಲಿದ್ದಾರೆ ಎಂದರು.ಕಾರ್ಯಕ್ರಮಕ್ಕೆ ಕಲಬುರಗಿ ಮಾತ್ರವಲ್ಲ ಯಾದಗಿರಿ, ರಾಯಚೂರು, ಬಳ್ಳಾರಿ, ಬೀದರ್, ಕೊಪ್ಪಳ ಹಾಗೂ ವಿಜಯಪುರ ಜಿಲ್ಲೆಗಳಿಂದ ಜನ ಆಗಮಿಸಲ್ಲಿದ್ದಾರೆ ಎಂದರು.