ಕರ್ನಾಟಕ

karnataka

ಕನ್ನಡ ಪರ ಸಂಘಟನೆಗಳು‌ ಕರೆ ನೀಡಿರುವ ಬಂದ್ ಹಿಂಪಡೆಯುವಂತೆ ಗುತ್ತೇದಾರ್ ಮನವಿ

ಕನ್ನಡ ಪರ ಸಂಘಟನೆಗಳು‌ ಕರೆ ನೀಡಿರುವ ಬಂದ್ ವಾಪಸ್​ ಪಡೆಯುವ ಮೂಲಕ ಮರಾಠ ಅಭಿವೃದ್ಧಿ ಪ್ರಾಧಿಕಾರಕ್ಕೆ ಬೆಂಬಲಿಸುವಂತೆ ಕನ್ನಡ ಪರ ಹೋರಾಟಗಾರರಿಗೆ ಗುತ್ತೇದಾರ್ ಮನವಿ ಮಾಡಿದ್ದಾರೆ.

By

Published : Nov 23, 2020, 9:35 AM IST

Published : Nov 23, 2020, 9:35 AM IST

Malikaya Guttedar appeals to withdraw Kannada organizations Bandh
ಕನ್ನಡ ಪರ ಸಂಘಟನೆಗಳು‌ ಕರೆ ನೀಡಿರುವ ಬಂದ್ ಹಿಂಪಡೆಯುವಂತೆ ಗುತ್ತೆದಾರ್ ಮನವಿ

ಕಲಬುರಗಿ: ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಕನ್ನಡ ಪರ ಸಂಘಟನೆಗಳು‌ ಕರೆ ನೀಡಿರುವ ಬಂದ್ ಹಿಂಪಡೆಯುವಂತೆ ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಮನವಿ ಮಾಡಿದ್ದಾರೆ.

ಬಂದ್ ಹಿಂಪಡೆಯುವಂತೆ ಗುತ್ತೇದಾರ್ ಮನವಿ

ಬೆಂಗಳೂರಿನ ಆಸ್ಪತ್ರೆಯಿಂದಲೇ ವಿಡಿಯೋ ಹರಿಬಿಟ್ಟ ಗುತ್ತೇದಾರ್, ಕನ್ನಡ ಭಾಷೆ ವಿರೋಧಿಗಳ ಮರಾಠ ಪ್ರಾಧಿಕಾರ ಸೌಲಭ್ಯ ನೀಡುವುದು ಬೇಡ. ಬೆಳಗಾವಿಯಲ್ಲಿರುವ ಕೆಲ ಪುಂಡರಿಂದ ರಾಜ್ಯದ ಇತರ ಮರಾಠರಿಗೆ ಅನ್ಯಾಯ ಮಾಡುವುದು ಸರಿಯಲ್ಲ. ಬೆಳಗಾವಿಯಲ್ಲಿ ಕನ್ನಡ ನಾಡು, ನುಡಿ, ಭಾಷೆ ಬಗ್ಗೆ ಕಾಳಜಿ ಅಭಿಮಾನ ಇದ್ದವರಿಗೆ ಮಾತ್ರ ಮರಾಠ ಪ್ರಾಧಿಕಾರದ ಸೌಲಭ್ಯ ಎಂದು ಕಂಡಿಷನ್ ಹೊರಡಿಸೊಣಾ. ಕೆಲವರಿಗಾಗಿ ಎಲ್ಲರನ್ನು ದೋಷಿಸುವುದು ಒಳ್ಳೆಯದಲ್ಲ. ಆದರಿಂದಾಗಿ ಕನ್ನಡ ಪರ ಹೋರಾಟಗಾರು ತಮ್ಮ ಬಂದ್ ಪ್ರತಿಭಟನೆಯನ್ನು ವಾಪಸ್​​ ಪಡೆಯುವ ಮೂಲಕ ಮರಾಠ ಅಭಿವೃದ್ಧಿ ಪ್ರಾಧಿಕಾರಕ್ಕೆ ಬೆಂಬಲಿಸುವಂತೆ ಕನ್ನಡ ಪರ ಹೋರಾಟಗಾರರಿಗೆ ಗುತ್ತೇದಾರ್ ಮನವಿ ಮಾಡಿದ್ದಾರೆ.

For All Latest Updates

TAGGED:

ABOUT THE AUTHOR

...view details