ಕಲಬುರಗಿ:ಚಿತ್ತಾಪುರ ತಾಲೂಕು ಲಾಡ್ಲಾಪುರ ಗ್ರಾಮದ ಪ್ರಸಿದ್ಧ ಹಿಂದೂ ಮುಸ್ಲಿಂ ಭಾವೈಕ್ಯತೆ ತಾಣವಾದ ಹಾಜಿಸರ್ವರ್ ದೇವರ ಹುಂಡಿಗೆ ಖದೀಮರು ಕನ್ನ ಹಾಕಿದ್ದಾರೆ.
ಹಿಂದೂ ಮುಸ್ಲಿಂ ಭಾವೈಕ್ಯತೆಯ ತಾಣ ಲಾಡ್ಲಾಪೂರ ಹಾಜಿಸರ್ವರ್ ದೇವರ ಹುಂಡಿಗೆ ಕನ್ನ - ಕಲಬುರಗಿ ಇತ್ತೀಚಿನ ಸುದ್ದಿ
ಹಿಂದೂ ಮುಸ್ಲಿಂ ಭಾವೈಕ್ಯತೆ ತಾಣವಾದ ಹಾಜಿಸರ್ವರ್ ದೇವರ ಹುಂಡಿಗೆ ಖದೀಮರು ಕನ್ನ ಹಾಕಿ ಸುಮಾರು 5 ಲಕ್ಷಕ್ಕೂ ಅಧಿಕ ಹಣವನ್ನು ಕಳ್ಳತನ ಮಾಡಿದ್ದಾರೆ.
ಲಾಡ್ಲಾಪೂರ ಹಾಜಿಸರ್ವರ್ ದೇವರ ಹುಂಡಿ
ದೇವಸ್ಥಾನ ಆವರಣದಲ್ಲಿರುವ ಹುಂಡಿ ಒಡೆದು ಹಣ ಲಪಟಾಯಿಸಿದ್ದಾರೆ. ಕಳೆದ ಒಂದು ವರ್ಷದಿಂದ ಹುಂಡಿಯಲ್ಲಿ ಜಮಾ ಆಗಿದ್ದ ಸುಮಾರು 5 ಲಕ್ಷಕ್ಕೂ ಅಧಿಕ ಹಣ ರಾತ್ರೋರಾತ್ರಿ ಎಗರಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಕೆಲ ಚಿಲ್ಲರೆ ನಾಣ್ಯಗಳು ಹಾಗೆ ಬಿಟ್ಟಿದ್ದು, ದೇವಸ್ಥಾನದ ಹೊರವಲಯದಲ್ಲಿಯೂ ಚಿಲ್ಲರೆ ಹಣ ಬಿಸಾಡಿ ಹೋಗಿದ್ದಾರೆ. ಸ್ಥಳಕ್ಕೆ ವಾಡಿ ಪಿಎಸ್ಐ ವಿಜಯಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.