ಕರ್ನಾಟಕ

karnataka

By

Published : Feb 27, 2020, 11:30 PM IST

ETV Bharat / state

ಕೆಎಸ್ಆರ್​ಟಿಸಿ ಬಸ್ ದರ ಏರಿಕೆ: ಕಲಬುರಗಿಯಲ್ಲಿ ಎಸ್​ಯುಸಿಐ ಪ್ರತಿಭಟನೆ

ಕಲಬುರಗಿ ಕೆಎಸ್ಆರ್​ಟಿಸಿ ಬಸ್ ದರ ಏರಿಕೆ ಖಂಡಿಸಿ ಎಸ್​ಯುಸಿಐ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕಲಬುರಗಿಯಲ್ಲಿ ಎಸ್​ಯುಸಿಐ ಪ್ರತಿಭಟನೆ
SUCI Protest in Kalaburagi

ಕಲಬುರಗಿ :ಕೆಎಸ್ಆರ್​ಟಿಸಿ ಬಸ್ ದರ ಏರಿಕೆ ಖಂಡಿಸಿ ಎಸ್​ಯುಸಿಐ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕಲಬುರಗಿಯಲ್ಲಿ ಎಸ್​ಯುಸಿಐ ಪ್ರತಿಭಟನೆ

ನಗರದ ಕೇಂದ್ರ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಾರಿಗೆ ಬಸ್ ದರ ಏರಿಸಿ ರಾಜ್ಯ ಸರ್ಕಾರ ಜನಸಾಮಾನ್ಯರ ಗಾಯದ ಮೇಲೆ ಬರೆ ಎಳೆದಿದೆ. ಇಲಾಖೆ ನಷ್ಟ ಸರಿದೂಗಿಸಿಕೊಳ್ಳಲು ಭ್ರಷ್ಟಾಚಾರ, ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು. ಅದನ್ನು ಬಿಟ್ಟು ಈ ರೀತಿ ದರ ಏರಿಕೆ ಮಾಡೋದು ಸರಿಯಲ್ಲ ಎಂದು ಕಿಡಿಕಾರಿದರು.

ಕೂಡಲೇ ದರ ಏರಿಕೆ ವಾಪಸ್ ಪಡೆಯುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

ABOUT THE AUTHOR

...view details