ಕರ್ನಾಟಕ

karnataka

ETV Bharat / state

ಶ್ರೀ ಶರಣಬಸವೇಶ್ವರ ಅದ್ಧೂರಿ ರಥೋತ್ಸವ; ಸಹಸ್ರ ಸಂಖ್ಯೆಯಲ್ಲಿ ಭಕ್ತರು ಭಾಗಿ- ವಿಡಿಯೋ - ETV Bharat kannada News

ಶ್ರೀ ಶರಣ ಬಸವೇಶ್ವರ ಜಾತ್ರೆಯ ಅಂಗವಾಗಿ ಭಾನುವಾರ ಅದ್ಧೂರಿಯಾಗಿ ರಥೋತ್ಸವ ನೆರವೇರಿತು.

Sharanbasaveshwar Rathotsava
ಶರಣಬಸವೇಶ್ವರ ರಥೋತ್ಸವ

By

Published : Mar 13, 2023, 10:39 AM IST

ಶ್ರೀ ಶರಣಬಸವೇಶ್ವರ ಅದ್ಧೂರಿ ರಥೋತ್ಸವ

ಕಲಬುರಗಿ :ಕಲ್ಯಾಣ ಕರ್ನಾಟಕದ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾದ ಕಲಬುರಗಿಯ ಮಹಾದಾಸೋಹಿ ಶ್ರೀ ಶರಣಬಸವೇಶ್ವರರ ಜಾತ್ರಾ ಮಹೋತ್ಸವ ಭಾನುವಾರ ವೈಭವದಿಂದ ಜರುಗಿತು. ಶರಣರ 201ನೇ ಜಾತ್ರೋತ್ಸವದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು. ಭಕ್ತರು ಖಾರಿಕು, ಬಾಳೆ ಹಣ್ಣುಗಳನ್ನು ರಥಕ್ಕೆ ಎಸೆದು ಭಕ್ತಿಭಾವ ಮೆರೆದರು.

ಸಂತಾನ ಭಾಗ್ಯ, ಕಂಕಣ ಭಾಗ್ಯ ಹಾಗು ಬೇಡಿದ್ದನ್ನು ಕರುಣಿಸುವ ಕಲ್ಯಾಣ ನಾಡಿನ ಜನರ ಆರಾಧ್ಯ ದೈವವೆಂದೇ ಶರಣಬಸವೇಶ್ವರರನ್ನು ಭಕ್ತರು ನಂಬುತ್ತಾರೆ. ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಿಂದಲೂ ಅಸಂಖ್ಯಾತ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ದೇವಸ್ಥಾನದ ಅಕ್ಕಪಕ್ಕದ ಕಟ್ಟಡಗಳ ಮೇಲೆ ಕುಳಿತ ಜನರು ಅಪಾಯ ಲೆಕ್ಕಿಸದೆ ರಥೋತ್ಸವ ಕಣ್ತುಂಬಿಕೊಂಡರು. ಇದಕ್ಕೂ ಮುನ್ನ ಶರಣ ಬಸವೇಶ್ವರ ದೇವಸ್ಥಾನ ಸಂಸ್ಥಾನದ ಪೀಠಾಧಿಪತಿ ಶ್ರೀ ಶರಣಬಸಪ್ಪ ಅಪ್ಪಾ ಪರಸು ಬಟ್ಟಲನ್ನು ಭಕ್ತರತ್ತ ಪ್ರದರ್ಶಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.

ರಥ ಸಾಗುತ್ತಿದ್ದಂತೆ ಬಸವೇಶ್ವರರ ಜೈಘೋಷ ಮೊಳಗಿತು. ಈ ವರ್ಷ ವಿಶೇಷವಾಗಿ ರಥ ಸ್ವಸ್ಥಾನ‌ಕ್ಕೆ ಮರಳುತಿದ್ದಂತೆ ಕಾಶಿ ಗಂಗಾರತಿಯಂತೆ ಮಾದರಿಯಲ್ಲಿ ತಾನಾರತಿ, ಶರಣಾರತಿ ಬೆಳಗಿತು. ಇದಕ್ಕಾಗಿ ಕಾಶಿಯಿಂದ 9 ಜನರ ವಿಶೇಷ ಅರ್ಚಕರ ತಂಡವನ್ನು ಕರೆಸಲಾಗಿತ್ತು. ಭಕ್ತರು ಭಾಗಶಃ ಉಪವಾಸ ಕೈಗೊಂಡು ರಥೋತ್ಸವ ಜರುಗಿದ ಬಳಿಕ ಫಲಹಾರ ಸೇವಿಸಿದರು. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತ ಸಾಗರ ಶರಣನ ಕೃಪೆಗೆ ಪಾತ್ರರಾದರು.

ಇದನ್ನೂ ಓದಿ:ಭಾವೈಕ್ಯತೆ ಬೆಸೆದ ತಳವಗೇರಾ ಬೆಳದಿಂಗಳ ಬುತ್ತಿ ಜಾತ್ರೆ

ABOUT THE AUTHOR

...view details