ಕಲಬುರಗಿ:ಮಾಜಿ ಶಾಸಕ ಎಐಎಂಐಎಂ ಪಕ್ಷದ ಮುಖಂಡ ವಾಿರೀಸ್ ಪಠಾಣ್ ಪ್ರಚೋದನಕಾರಿ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಚಾರಣೆಗೆ ಹಾಜರಾಗುವಂತೆ 2 ನೇ ಬಾರಿ ನೋಟಿಸ್ ಜಾರಿ ಮಾಡಲಾಗಿದೆ.
ಪ್ರಚೋದನಕಾರಿ ಹೇಳಿಕೆ: ವಿಚಾರಣೆಗೆ ಹಾಜರಾಗಲು ವಾರೀಸ್ ಪಠಾಣ್ಗೆ 2ನೇ ನೋಟಿಸ್ - ಸಿಎಎ ವಿರೋಧಿ ಸಮಾವೇಶ
ಮಾಜಿ ಶಾಸಕ ಎಐಎಂಐಎಂ ಪಕ್ಷದ ಮುಖಂಡ ವಾರೀಸ್ ಪಠಾಣ್ ಪ್ರಚೋದನಕಾರಿ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಚಾರಣೆಗೆ ಹಾಜರಾಗುವಂತೆ 2 ನೇ ಬಾರಿ ನೋಟಿಸ್ ಜಾರಿ ಮಾಡಲಾಗಿದೆ.
![ಪ್ರಚೋದನಕಾರಿ ಹೇಳಿಕೆ: ವಿಚಾರಣೆಗೆ ಹಾಜರಾಗಲು ವಾರೀಸ್ ಪಠಾಣ್ಗೆ 2ನೇ ನೋಟಿಸ್ AIMIM leader Waris Pathan](https://etvbharatimages.akamaized.net/etvbharat/prod-images/768-512-6300784-thumbnail-3x2-klvb.jpg)
ಗ್ರಾಮೀಣ ಠಾಣೆ ಪೊಲೀಸರು ಇದೇ 8ನೇ ಖುದ್ದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಮೊದಲನೆ ನೋಟಿಸ್ ನೀಡಿದರೂ ವಿಚಾರಣೆಗೆ ಹಾಜರಾಗದ ಹಿನ್ನೆಲೆ ಎರಡನೇ ನೋಟಿಸ್ ಜಾರಿ ಮಾಡಲಾಗಿದೆ. ಫೆಬ್ರವರಿ 15 ರಂದು ಕಲಬುರಗಿ ನಗರದ ಪೀರ್ ಬಂಗಾಲಿ ಮೈದಾನದಲ್ಲಿ ನಡೆದ ಸಿಎಎ ವಿರೋಧಿ ಸಮಾವೇಶದಲ್ಲಿ ಪಠಾಣ್ ತಮ್ಮ ಭಾಷಣದಲ್ಲಿ ನಾವು 15 ಕೋಟಿ ಜನರಿದ್ದು, ನಿಮ್ಮ 100 ಕೋಟಿ ಜನರ ಮೇಲೆ ಪರಿಣಾಮ ಬೀರಲಿದ್ದೇವೆ ಎಂದಿದ್ದರು.
ಇದು ಹಿಂದು- ಮುಸ್ಲಿಂ ಭಾವೈಕ್ಯತೆಗೆ ಧಕ್ಕೆ ಉಂಟು ಮಾಡುವ ಭಾಷಣ ಎಂದು ವಕೀಲೆ ಶ್ವೇತಾ ಗ್ರಾಮೀಣ ಠಾಣೆಯಲ್ಲಿ ಪಠಾಣ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ದೂರಿನ ಮೇರೆಗೆ ಈಗಾಗಲೇ 14 ಜನರ ವಿಚಾರಣೆ ನಡೆಸಿರುವ ಪೊಲೀಸರು ಪಠಾಣ್ ಖುದ್ದು ಹಾಜರಾಗುವಂತೆ ಎರಡನೇ ನೋಟಿಸ್ ಜಾರಿ ಮಾಡಿದ್ದಾರೆ.